ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಇಂದು ಮತ್ತೆ ನಾಲ್ಕು ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಇದರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.
ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಆಗಿದೆ. ಯುಗಾದಿ ಹಬ್ಬ, ಅದು ಇದು ಎಂದು ಹೊರಗ ಬರ್ತಿದ್ದು, ಇಂತಹ ಟೈಂನಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಜನರು ಇದನ್ನ ತುಂಬಾ ಲಘುವಾಗಿ ತೆಗೆದುಕೊಳ್ಳಬೇಡಿ. ಶನಿವಾರ ಐವರಲ್ಲಿ, ಭಾನುವಾರ ಆರು ಜನರಲ್ಲಿ, ಸೋಮವಾರ 7 ಜನರಲ್ಲಿ, ಇವತ್ತು ಮತ್ತೆ 4 ಜನರಲ್ಲಿ ಕಾಣಿಸಿಕೊಂಡಿದೆ. ಸಂಜೆಯೊಳಗೆ ಇನ್ನು ಏನ್ ಆಗುತ್ತೋ.. ದಯವಿಟ್ಟು ಯಾರು ಮನೆಯಿಂದ ಆಚೆ ಬರಬೇಡಿ.