ಬೆಂಗಳೂರು: ಕೋವಿಡ್ ವಾರಿಯರ್ಸ್ ಲಿಸ್ಟ್ ನಲ್ಲಿ ಪತ್ರಕರ್ತರು ಇದ್ದಾರೆ. ಆದ್ರೆ, ವಿಮಾ ವ್ಯಾಪ್ತಿಯಲ್ಲಿ ಇರಲಿಲ್ಲ. ಇದೀಗ ವಿಮಾ ವ್ಯಾಪ್ತಿಗೆ ತರಲು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಸಚಿವ ಡಾ.ಕೆ ಸುಧಾಕರ ಹೇಳಿದ್ದಾರೆ.
ಕರೋನಾ ಸೋಂಕಿನ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸ್ತಿರುವವರಲ್ಲಿ ಪತ್ರಕರ್ತರ ಪಾತ್ರ ಬಹುದೊಡ್ಡದಿದೆ. ಅವರನ್ನ ವಿಮೆ ವ್ಯಾಪ್ತಿಗೆ ತರಬೇಕೆಂದು ‘ಪ್ರಜಾಸ್ತ್ರ’ ವೆಬ್ ಪೋರ್ಟಲ್ ಸತತವಾಗಿ ಸುದ್ದಿ ಮಾಡುತ್ತಲೇ ಬರುತ್ತಿದೆ. ಅದೆ ರೀತಿ ಪತ್ರಕರ್ತರ ಸಂಘ ಸಹ ಮನವಿ ಮಾಡಿದ್ದು, ಇದಕ್ಕೆ ಸಿಎಂ ಭರವಸೆ ನೀಡಿದ್ದಾರೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.