ಪ್ರಜಾಸ್ತ್ರ ಸುದ್ದಿ
ಮೈಸೂರು: ಕರೋನಾ ಸೋಂಕಿನಿಂದ ಮೃತಪಟ್ಟ ತಂದೆಯ ಅಂತ್ಯಕ್ರಿಯೆ ನೆರವೇರಿಸಲು ಬನ್ನಿ ಎಂದು, ಮಹಾನಗರ ಪಾಲಿಕೆ ಸಿಬ್ಬಂದಿ ಮಗನಿಗೆ ಫೋನ್ ಮಾಡಿದ್ರೆ ನಾನು ಬರಲ್ಲ. ಅವರ ಆಸ್ತಿ ಕೊಡಿ ಎಂದು ಕೇಳಿದ ಅಮಾನವೀಯ ಘಟನೆ ನಡೆದಿದೆ.
ನಗರದ ಹೆಬ್ಬಾಳದ ಬಳಿಯ ಮನೆಯಲ್ಲಿ ಕೋವಿಡ್ ನಿಂದ ವ್ಯಕ್ತಿ ತೀರಿಕೊಂಡಿದ್ದಾರೆ. ಇವರ ಮಗ ಕುವೆಂಪು ನಗರದ ಶಾಂತಿ ಸಾಗರ ಕಾಂಪ್ಲೆಕ್ಸ್ ನಲ್ಲಿ ವಾಸವಾಗಿದ್ದಾರೆ. ಅವರಿಗೆ ಪಾಲಿಕೆ ಸದಸ್ಯ ಕೆ.ವಿ ಶ್ರೀಧರ ಫೋನ್ ಮಾಡಿ, ಅಂತ್ಯಕ್ರಿಯೆಗೆ ಕರೆದ್ರೆ, ನಾನು ಬರಲ್ಲ. ನೀವೆ ಅಂತ್ಯಕ್ರಿಯೆ ಮುಗಿಸಿ. ಅವರ ಬಳಿಯಿರುವ 6 ಲಕ್ಷ ರೂಪಾಯಿ ಹಾಗೂ ದಾಖಲೆ ತಂದು ಕೊಡಿ. ಅದರಲ್ಲೇ ನಿಮ್ಮ ಖರ್ಚನ್ನ ವಾಪಸ್ ಕೊಡುತ್ತೇನೆ ಎಂದಿದ್ದಾನಂತೆ.
ಮಗನ ಅಮಾನುಷ ಗುಣದಿಂದ ಸಿಟ್ಟಿಗೆದ್ದ ಸದಸ್ಯ ಕೆ.ವಿ ಶ್ರೀಧರ ಸರಿಯಾಗಿ ಬೈದಿದ್ದಾರೆ. ತಂದೆ ಮಗನ ಸಂಬಂಧಕ್ಕಿಂತ ಹಣ, ಆಸ್ತಿಗೆ ಬಾಯಿ ಬಿಟ್ಟ ಮಗನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.