ಪ್ರಜಾಸ್ತ್ರ ಸುದ್ದಿ
ಮಂಡ್ಯ: ದಸರಾ ಹಬ್ಬದ ಆಯುಧ ಪೂಜೆ ಸಂದರ್ಭದಲ್ಲಿ ಆಯಾ ವೃತ್ತಿಯವರು ತಮ್ಮಗೆ ಸಂಬಂಧಿಸಿದ ವಸ್ತುಗಳಿಂದ ಹಿಡಿದ ವಾಹನಗಳವರೆಗೂ ಪೂಜೆ ಸಲ್ಲಿಸುತ್ತಾರೆ. ಅದೆ ರೀತಿ ಸಾರಿಗೆ ನೌಕರರು ಬಸ್ ಪೂಜೆ ಮಾಡಲು ಸರ್ಕಾರ 50 ರೂಪಾಯಿ ಬಿಡುಗಡೆ ಮಾಡಿದೆ.
ವಿಭಾಗೀಯ ಕಾರ್ಯಾಗಾರಕ್ಕೆ ಒಂದು ಸಾವಿರ, ಪ್ರಾದೇಶಿಕ ಕಾರ್ಗಾರಕ್ಕೆ ಎರಡು ಸಾವಿರ ರೂಪಾಯಿ ನೀಡಿದೆ. ಮಂಡ್ಯ ಘಟಕಗಳಲ್ಲಿನ ಪ್ರತಿ ಬಸ್ ಗೆ 50 ರೂಪಾಯಿ ನೀಡಲಾಗಿದೆ. ಇದರಿಂದ ಕೆಎಸ್ಆರ್ ಟಿಸಿ ಸಿಬ್ಬಂದಿ ಆಕ್ರೋಶ ಹೊರ ಹಾಕಿದ್ದಾರೆ.
50 ರೂಪಾಯಿ ನೀಡಿ ಶ್ರದ್ಧಾ ಭಕ್ತಿಯಿಂದ ಆಯುಧ ಪೂಜೆ ಮಾಡಿ ಎಂದು ಸರ್ಕಾರ ಆದೇಶಿಸಿದೆ. 50 ರೂಪಾಯಿಯಲ್ಲಿ ಸರಿಯಾಗಿ ನಿಂಬೆಹಣ್ಣು ತಗೆದುಕೊಳ್ಳಲು ಆಗೋದಿಲ್ಲ. ಸರ್ಕಾರ ಕೂಡಲೇ ಪ್ರತಿ ವಾಹನಕ್ಕೆ 500 ರೂಪಾಯಿ ಕೋಡಬೇಕು ಎಂದು ಆಗ್ರಹಿಸಿದ್ದಾರೆ.