ನವದೆಹಲಿ: ಮೂರನೇ ಬಾರಿಗೆ ದೆಹಲಿ ಸಿಎಂ ಆಗಿ ಭಾನುವಾರ ಪ್ರಮಾಣ ವಚನ ಸ್ವೀಕಾರ ಮಾಡಿರುವ ಅರವಿಂದ ಕೇಜ್ರಿವಾಲ್ ಸಚಿವ ಸಂಪುಟದಲ್ಲಿ ಮೂರು ಪ್ರಮುಖ ಬದಲಾವಣೆಗಳನ್ನ ಮಾಡಿದ್ದಾರೆ. ಈ ಹಿಂದೆ ಇದ್ದ ಖಾತೆಯಿಂದ ಮೂವರನ್ನ ಸಿಎಂ ಬದಲಾವಣೆ ಮಾಡಿದ್ದಾರೆ.
ದೆಹಲಿ ಜಲ ಬೋರ್ಡ್ ಗೆ ಸತ್ಯೇಂದ್ರ ಜೈನ್, ಪರಿಸರ ವಿಭಾಗಕ್ಕೆ ಗೋಪಾಲ ರೈ ಹಾಗೂ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ವಿಭಾಗಕ್ಕೆ ರಾಜೇಂದ್ರ ಪಾಲ್ ಗೌತಮ ಅವರನ್ನ ನೇಮಕ ಮಾಡಲಾಗಿದೆ. ಸತ್ಯೇಂದ್ರ ಜೈನ್ ಈ ಹಿಂದೆ ನಗರಾಭಿವೃದ್ಧಿ ಸಚಿವರಾಗಿದ್ರು. ಗೋಪಾಲ ರೈ ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ರು. ಈ ಹಿಂದೆ ಸಮಾಜ ಕಲ್ಯಾಣ ಹಾಗೂ ಎಸ್ಸಿ, ಎಸ್ಟಿ ವಿಭಾಗದ ಮಂತ್ರಿಯಾಗಿದ್ದ ರಾಜೇಂದ್ರ ಪಾಲ್ ಗೌತಮ ಇದೀಗ ಮಹಿಳೆ ಹಾಗೂ ಮಕ್ಕಳ ಅಭಿವೃದ್ಧಿ ವಿಭಾಗದ ಮಂತ್ರಿ ಮಾಡಲಾಗಿದೆ. ಉಳಿದ ಮೂವರನ್ನ ಈ ಹಿಂದಿನ ಖಾತೆಯನ್ನ ನೀಡಲಾಗಿದೆ.