ಪ್ರಜಾಸ್ತ್ರ ಸುದ್ದಿ
ಮೈಸೂರು: ಜಿಲ್ಲೆಯ ಪರಿಯಾಪಟ್ಟಣದಲ್ಲಿರುವ ಸೆಂಟ್ ಮೇರಿಸ್ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ, ಬಾ ಏಸು ಮೂರ್ತಿ ಹಾಗೂ ತೊಟ್ಟಿಲು ಒಡೆದು ಹೋಗಿದ್ದಾರೆ. ಅಲ್ಲದೇ ಚರ್ಚ್ ಹೊರಗೆ ಇದ್ದ ಹುಂಡಿಯನ್ನು ಕಳ್ಳತನ ಮಾಡಲಾಗಿದೆ.
ಯಾರು ಇಲ್ಲದ ಸಂದರ್ಭದಲ್ಲಿ ಚರ್ಚ್ ಒಳಗೆ ನುಗ್ಗಿದ ದುಷ್ಕರ್ಮಿಗಳು ಈ ಕೃತ್ಯವನ್ನು ಎಸುಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಡಿಸೆಂಬರ್ 25ರಂದು ಎಲ್ಲೆಡೆ ಕ್ರಿಸ್ಮಸ್ ಆಚರಿಸಲಾಗಿದೆ. ಇದೀಗ ಇಂತಹ ಘಟನೆ ನಡೆದಿದೆ.