ಬೆಂಗಳೂರು: ಅನರ್ಹ ಶಾಸಕರು ಬಿಜೆಪಿ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ ಅಂತಾ ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವಗೆ ಅನರ್ಹ ಶಾಸಕ ಡಾ.ಸುಧಾಕರ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ನಿಂದ ಹೊರ ಬಂದು ನಾವಿಂದು ರಾಜರಂತೆ ಇದ್ದೇವೆ ಅಂತಾ ಹೇಳಿದ್ದಾರೆ.
ಕಾಂಗ್ರೆಸ್ ಈ ಸ್ಥಿತಿಗೆ ಬರಲು ದಿನೇಶ ಗುಂಡೂರಾವ ಕಾರಣ. ನಿಮ್ಮ ಕೆಟ್ಟ ನಿರ್ಧಾರಗಳಿಂದ ಲೋಕಸಭಾ ಚುನುವಾಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗೆಲ್ಲುವಂತಾಯ್ತು. ಇತಿಹಾಸದಲ್ಲಿ ಪಕ್ಷಕ್ಕೆ ಇಷ್ಟೊಂದು ಮುಖಭಂಗವಾಗಿರ್ಲಿಲ್ಲ. ಪಕ್ಷದ ಹೀನಾಯ ಸೋಲಿಗೆ ದಿನೇಶ ಗುಂಡೂರಾವ ಕಾರಣ ಎಂದು ವಾಗ್ದಾಳಿ ನಡೆಸಿದ್ರು.
ನಿಮ್ಮ ಮಾತಿನ ಮೇಲೆ ನಿಗಾ ಇರ್ಲಿ. ನಾವು ಭಿಕ್ಷುಕರಲ್ಲ. ನಿಮ್ಮ ಕೆಟ್ಟ ನಿರ್ಧಾರಗಳಿಂದ ಸಣ್ಣ ಪಕ್ಷದ ಎದುರು ಕಾಂಗ್ರೆಸ್ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿತು ಎಂದು ಆಕ್ರೋಶ ಹೊರಹಾಕಿದ್ದಾರೆ.