ಬೆಳಗೆರೆಗೆ ‘ಸಲಗ’ದ ಡಿಚ್ಚಿ

397

ಬೆಂಗಳೂರು: ನಟ ದುನಿಯಾ ವಿಜಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ವಿರುದ್ಧ ಫುಲ್ ವಾಗ್ದಾಳಿ ನಡೆಸಿದ್ದಾರೆ. ‘ಬಡವ ರಾಸ್ಕಲ್’ ಸಿನ್ಮಾದ ಸುದ್ದಿಗೋಷ್ಠಿಯಲ್ಲಿ ಮಾತ್ನಾಡಿದ ನಟ ದುನಿಯಾ ವಿಜಿ, ಏಕ ವಚನದಲ್ಲಿಯೇ ನಿಂದಿಸಿದ್ದಾರೆ.

ದರ್ಶನ ಹಾಗೂ ವಿಜಯ ಸಂಸಾರದ ಬಗ್ಗೆ ಬೆಳಗೆರೆ ಮಾತ್ನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಮಾತ್ನಾಡಿದ ದುನಿಯಾ ವಿಜಿ, ಮೊದಲು ತಮ್ಮ ಕುಟುಂಬ ನೆಟ್ಟಗಿದೆಯಾ ಎಂದು ನೋಡಿಕೊಳ್ಳಲಿ. ಆಮೇಲೆ ದರ್ಶನ ಬಗ್ಗೆಯಾಗ್ಲಿ, ನಮ್ಮ ಬಗ್ಗೆಯಾಗ್ಲಿ ಮಾತ್ನಾಡ್ಲಿ. ಆರು ತಿಂಗಳು ಆಸ್ಪತ್ರೆಯಲ್ಲಿ ಬಿದ್ದಿರುತ್ತಾನೆ. ಇನ್ನು ಬದುಕಿದ್ದಾನಾ ಅವನು ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ದುನಿಯಾ ವಿಜಯ ಬ್ಲ್ಯಾಕ್ ಕೋಬ್ರಾ ಅಲ್ಲ ಕರಿ ಗೊಬ್ಬರ. ಎಷ್ಟು ಜನರನ್ನ ಮದುವೆಯಾಗ್ತಿಯಾ. ಇವನು ಜೈಲು ಗಿರಾಕಿ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಅದಕ್ಕೆ ದುನಿಯಾ ವಿಜಿ ಫುಲ್ ಗರಂ ಆಗಿಯೇ ಮಾತ್ನಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!