ಸಿಐಡಿ ಡಿವೈಎಸ್ಪಿ ಸಾವಿನ ಸುತ್ತ ಅನುಮಾನ: ನಾಲ್ವರು ವಶಕ್ಕೆ

301

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ವಿನಾಯಕ ಲೇಔಟ್ ನ ಖಾಸಗಿ ಅಪಾರ್ಟ್ಮೆಂಟ್ ವೊಂದರಲ್ಲಿ ಸಿಐಡಿ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದ್ದು, ಲಕ್ಷ್ಮೀ ತಂದೆ ದೂರು ನೀಡಿದ್ದಾರೆ. ಲಕ್ಷ್ಮೀ ತಂದೆ ವೆಂಕಟೇಶ, ಅನ್ನಪೂರ್ಣೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮಗಳ ಸಾವಿನ ಬಗ್ಗೆ ಮಾತ್ನಾಡಿರುವ ಅವರು, ಮಗಳಿಗೆ ಯಾವುದೇ ಖಿನ್ನತೆ ಇರ್ಲಿಲ್ಲ. ಅವರ ಸಂಸಾರಿಕ ಜೀವನದಲ್ಲಿಯೂ ತೊಂದರೆಯಿರ್ಲಿಲ್ಲ. ಮನೆ, ಹಣ, ಅಧಿಕಾರ ಎಲ್ಲವೂ ಇರುವಾಗ ಆಕೆ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎಂದಿದ್ದಾರೆ.

ರೂಮಿನಲ್ಲಿ ಕಿಟಕಿಯ ಕಂಬಿಗೆ ನೇಣು ಹಾಕಿಕೊಂಡಿದ್ರು ಎನ್ನುತ್ತಾರೆ. ಕಾಲುಗಳು ನೆಲಕ್ಕೆ ತಗುಲಿದ್ವು ಅಂತಾರೆ. ಅದು ಹೇಗೆ ಸಾಧ್ಯ. ತಮ್ಗೆ ಸಾವಿನ ಬಗ್ಗೆ ಅನುಮಾನವಿದ್ದು ಸ್ನೇಹಿತರ ವಿರುದ್ಧ ದೂರು ನೀಡಿದ್ದೇನೆ ಎಂದಿದ್ದಾರೆ. ಈ ಸಂಬಂಧ ಐವರನ್ನ ವಿಚಾರಣೆ ಮಾಡಲಾಗಿದೆ. ಇನ್ನು ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಸಧ್ಯ ಲಕ್ಷ್ಮೀ ಅವರ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!