ನವದೆಹಲಿ: ನಿನ್ನೆ ರಾತ್ರಿ 8 ಗಂಟೆಗೆ ಮಾತ್ನಾಡಿದ ಪ್ರಧಾನಿ ಮೋದಿ, ಕರೋನಾ ವೈರಸ್ ವಿರುದ್ಧ ಭಾರತ ಹೇಗೆ ಹೋರಾಡಬೇಕು ಅನ್ನೋದು ಎಂದಿನಂತೆ ತಮ್ಮ ಭಾಷಣದಲ್ಲಿ ಹೇಳಿದ್ರು. ಇದರ ನಡುವೆ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಇದು ದೇಶದ ಜಿಡಿಪಿ ಶೇಕಡ 10ರಷ್ಟು ಇದೆ ಎಂದಿದ್ದಾರೆ.
ಹೀಗೆ ಘೋಷಣೆ ಮಾಡಿದ ವಿಶೇಷ ಆರ್ಥಿಕ ಪ್ಯಾಕೇಜ್ ನಲ್ಲಿ ಯಾವ ವಲಯಕ್ಕೆ ಎಷ್ಟು ಅನ್ನೋದನ್ನ ಹೇಳಲಿಲ್ಲ. ರೈತರು, ಕಾರ್ಮಿಕರು, ಮಧ್ಯಮ ವರ್ಗದವರು, ಉದ್ಯೋಗ ಅಂತೆಲ್ಲ ಹೇಳಿದ್ರು. ಆದ್ರೆ, ಅರ್ಧ ಗಂಟೆಯ ಭಾಷಣದಲ್ಲಿ ಎಲ್ಲಿಯೂ ಈ ವಲಯಕ್ಕೆ ಇಷ್ಟು ಕೋಟಿ ಎಂದು ಹೇಳಲೇ ಇಲ್ಲ. 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನೀಡಲಾಗ್ತಿದೆ. ದೇಶದ ಆರ್ಥಿಕತೆಗೆ ಶಕ್ತಿ ತುಂಬುತ್ತೆ ಎಂದರು. ಪ್ರತ್ಯೇಕ ಈ ಎಲ್ಲಾ ವಲಯಗಳಿಗೆ ಇಷ್ಟಿಷ್ಟು ಕೋಟಿ ಹಣ ನೀಡಲಾಗ್ತಿದೆ ಅಂತಾ ಹೇಳಲಿಲ್ಲ. ಹೀಗಾಗಿ ಅದನ್ನ ಹೇಳಲು ಯಾರು ಬರುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸ್ತಿದ್ದಾರೆ.
ಇನ್ನು ಈಗಿನ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ 20 ಲಕ್ಷ ಕೋಟಿ ರೂಪಾಯಿಯನ್ನ ಹೇಗೆ ಹೊಂದಾಣಿಕೆ ಮಾಡಿದ್ದಾರೆ. ಅದರ ಮೂಲ ಏನು? ಘೋಷಣೆಯಾದ ಹಣ ಎಷ್ಟು ದಿನದಲ್ಲಿ ಫಲಾನುಭವಿಗಳಿಗೆ ತಲುಪುತ್ತೆ ಅನ್ನೋದು ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ತಿಳಿಸಬೇಕಿತ್ತು. ಇದ್ಯಾವುದೂ ಮಾಡಿಲ್ಲ. ಇದನ್ನ ಹೇಳಲು ಇಂದು ಸಂಜೆ 4 ಗಂಟೆಗೆ ವಿತ್ ಸಚಿವೆ ನಿರ್ಮಲಾ ಸೀತಾರಾಮನ್ ಬರಲಿದ್ದಾರಂತೆ.