ಕೊಪ್ಪಳ: ನಗರದಲ್ಲಿ ಸುಧಾ ಕಲ್ಚರಲ್ ಅಕಾಡೆಮಿನಿಂದ, ಉತ್ತರ ಕರ್ನಾಟಕ ಭಾಗದ ಪ್ರವಾಹ ಸಂತ್ರಸ್ತರ ಸಲುವಾಗಿ ನಿಧಿ ಸಂಗ್ರಹಿಸಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಅಕಾಡೆಮಿ ಸದಸ್ಯರು, ಸ್ಥಳೀಯರಿಂದ ಒಂದಿಷ್ಟು ನೆರವು ಪಡೆದುಕೊಂಡ್ರು.
ರಣಭಯಂಕರ ಮಳೆಯಿಂದ ಇಷ್ಟು ವರ್ಷದ ಬದುಕನ್ನ ನೀರುಪಾಲಾಗಿ ಕಣ್ಣೀರು ಹಾಕ್ತಿರುವ ನೆರೆಯ ಜಿಲ್ಲೆಯ ಜನರ ನೋವಿಗೆ ಕೊಪ್ಪಳ ಜಿಲ್ಲೆಯ ಜನ ಸ್ಪಂದಿಸಿದ್ದಾರೆ. ಬೆವರು ಸುರಿಸಿ ದುಡಿದ ಹಣವನ್ನ ನಿರಾಶ್ರಿತರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆಯನ್ನ ಮೆರೆದಿದ್ದಾರೆ.