ಸಿಡಿಲು ಬಡಿದು ನಾಲ್ವರ ಸಾವು

263

ಪ್ರಜಾಸ್ತ್ರ ಸುದ್ದಿ

ಯಾದಗಿರಿ: ಮರದ ಕೆಳಗೆ ನಿಂತ ಸಂದರ್ಭದಲ್ಲಿ ಸಿಡಿಲು ಬಡಿದು ತಾಯಿ, ಇಬ್ಬರು ಮಕ್ಕಳು ಹಾಗೂ ಓರ್ವ ಯುವಕ ಮೃತಪಟ್ಟ ದಾರುಣ ಘಟನೆ ಗುರುಮಠಕಲ್ ತಾಲೂಕಿನ ಎಸ್.ಹೊಸಹಳ್ಳಿ ಹತ್ತಿರ ನಡೆದಿದೆ.

ಗಾಜರಕೋಟ ಗ್ರಾಮದ ಮೋನಮ್ಮ(25), ಮಕ್ಕಳಾದ ಬಾನು(4), ಶ್ರೀನಿವಾಸ್(2) ಹಾಗೂ ಹೊಸಹಳ್ಳಿಯ ಸಾಬಣ್ಣ(17) ಮೃತ ದುರ್ದೈವಿಗಳು. ಯಾದಗಿರಿಯ ಆಸ್ಪತ್ರೆಗೆ ತೆರಳಿ ವಾಪಸ್ ಬರುವಾಗ ಮಳೆ ಬರಲು ಶುರು ಮಾಡಿದೆ. ಹೀಗಾಗಿ ಇದರಿಂದ ಮರದ ಕಳೆಗೆ ನಿಂತಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿ ಮೋನಮ್ಮ ಮೈದುನ ಭೀಮಾಶಂಕರ ಸ್ಥಿತಿ ಗಂಭೀರವಾಗಿದೆ. ಗಾಯಾಳುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!