ಸಿಂದಗಿ: ಪಟ್ಟಣದ ಮನಗೂಳಿ ಆಸ್ಪತ್ರೆಯಲ್ಲಿ ಉಚಿತ ಹೃದಯ ರೋಗ, ನರರೋಗ ಹಾಗೂ ಮೂತ್ರಪಿಂಡ ತಪಾಸಣಾ ಶಿಬಿರ ನಡೆಸಲಾಯ್ತು. ಶಾಸಕ ಎಂ.ಸಿ ಮನಗೂಳಿ ಅವರ ಸಹಕಾರದೊಂದಿಗೆ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ವತಿಯಿಂದ ವಿವಿಧ ಖಾಯಿಲೆಗಳ ಉಚಿತ ತಪಾಸಣಾ ಶಿಬಿರ ನಡೆಸಲಾಯ್ತು.
ಶಿಬಿರದಲ್ಲಿ ಭಾಗವಹಿಸಿದ ನುರಿತ ವೈದ್ಯರ ತಂಡ, ಹೃದಯ ರೋಗಕ್ಕೆ ಸಂಬಂಧಿಸಿದಂತೆ 120 ಜನರ ತಪಾಸಣೆ, 350 ಜನರ ನರರೋಗ ತಪಾಸಣೆ, 100 ಜನರ ಕಿಡ್ನಿ ಸ್ಟೋನ್ ತಪಾಸಣೆ, ಸಾಮಾನ್ಯ ತಪಾಸಣೆ 150, ಇಸಿಜಿ 100 ಸೇರಿದಂತೆ ನೂರಾರು ಜನರಿಗೆ ಉಚಿತ ತಪಾಸಣೆ ಮಾಡಿ ಸಲಹೆ ಸೂಚನೆಗಳನ್ನ ನೀಡಲಾಯ್ತು.
ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ, ಶಾಸಕರಾದ ಎಂ.ಸಿ ಮನಗೂಳಿ ಅವರು, ಶಿಬಿರದ ಕುರಿತು ಮಾಹಿತಿ ಪಡೆದುಕೊಂಡ್ರು. ಶಿಬಿರದ ಬಳಿಕ ಆಸ್ಪತ್ರೆಯ ಪರವಾಗಿ ಡಾ.ಶಾಂತು ಮನಗೂಳಿ ಅವರು ವೈದ್ಯರಿಗೆ ಹೂಗುಚ್ಛ ನೀಡಿ ಧನ್ಯವಾದಗಳನ್ನ ಸಲ್ಲಿಸಿದ್ರು.