ಪ್ರಜಾಸ್ತ್ರ ಸುದ್ದಿ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ವಿಶ್ವದ ಘಟಾನುಘಟಿ ನಾಯಕರು ಭಾಗವಹಿಸಿದ್ದಾರೆ. ಅಂತಾರಾಷ್ಟ್ರೀಯ ವಿಚಾರಗಳು, ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಯುತ್ತಿವೆ. ಭಾನುವಾರ ಮಹಾತ್ಮ ಗಾಂಧಿ ಸ್ಮಾರಕಕ್ಕೆ ತೆರಳಿದ ನಾಯಕರು ಗೌರವ ಅರ್ಪಿಸಿದರು.
ರಾಜಘಾಟ್ ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕ್ಕೆ ತೆರಳಿದರು. ಈ ವೇಳೆ ಪ್ರಧಾನಿ ಮೋದಿ ಅತಿಥಿಗಳಿಗೆ ಖಾದಿ ಶಾಲು ನೀಡಿದರು. ಖಾದಿ ಭಾರತ ಸ್ವಾತಂತ್ರ್ಯದ ಪ್ರತೀಕ. ಶಾಲು ಹೊದ್ದುಕೊಂಡ ನಾಯಕರು ಗಾಂಧಿ ಸ್ಮಾರಕದ ಮುಂದೆ ತಲೆ ಬಾಗಿ ನಿಂತು ಸ್ವಲ್ಪ ಹೊತ್ತು ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಿದರು.