ಗೋದಾಮುವಿಗೆ ಬೆಂಕಿ: 11 ಕಾರ್ಮಿಕರ ದುರ್ಮರಣ

193

ಪ್ರಜಾಸ್ತ್ರ ಸುದ್ದಿ

ಸಿಕಂದರಾಬಾದ್: ಗೋದಾಮುವೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿ 11 ಕಾರ್ಮಿಕರು ದುರ್ಮರಣ ಹೊಂದಿದ ಘಟನೆ ತೆಲಂಗಾಣದ ಸಿಕಂದರಾಬಾದ್ ನ ಟಿಂಬರ್ ಯಾರ್ಡ್ ನಲ್ಲಿ ಬುಧವಾರ ನಡೆದಿದೆ.

ಬಿಹಾರ ಮೂಲದ 11 ಕಾರ್ಮಿಕರು ಮೃತಪಟ್ಟಿದ್ದಾರೆ. 2ನೇ ಮಹಡಿಯಲ್ಲಿ 12 ಜನರು ಮಲಗಿದ್ದರು. ಒರ್ವ ಮೇಲಿಂದ ಹಾರಿ ಪಾರಾಗಿದ್ದಾನೆ. ಕಟ್ಟಡದಲ್ಲಿ ಒಂದು ಕಡೆ ಸಣ್ಣದಾದ ಮೆಟ್ಟಿಲುಗಳ ವ್ಯವಸ್ಥೆ ಇದೆ. ಬೆಂಕಿ ಅನಾಹುತದ ವೇಳೆ ಹೊರ ಬರಲು ಆಗದೆ ದುರಂತ ಸಂಭವಿಸಿದೆ.

ಇನ್ನು ಘಟನೆಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಕೆ.ಸಿ ರಾವ್ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!