ಪ್ರಜಾಸ್ತ್ರ ಸುದ್ದಿ
ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮಕ್ಕೆ ಹೊರಟ್ಟಿದ್ದ ಅಧಿಕಾರಿಯ ಕಾರು ಪಲ್ಟಿಯಾಗಿದೆ. ಇದ್ರಿಂದಾಗಿ ಸಿದ್ದಾಪುರ ಲೋಕೋಪಯೋಗಿ ಇಲಾಖೆಯ ಎಇಇ ಮುದಕಣ್ಣನವರ ಮೃತಪಟ್ಟಿದ್ದಾರೆ. ಶಿರಸಿ ಲೋಕೋಪಯೋಗಿ ಇಲಾಖೆಯ ಎಇಇ ಕೃಷ್ಣಾರೆಡ್ಡಿ, ಪಿಡಿಒ ಚೇತನ, ತಾಂತ್ರಿಕ ಸಹಾಯಕ ರವಿ ಪಾಟೀಲ, ಕಾರು ಚಾಲಕ ರಘವೇಂದ್ರ ನಾಗೇಶ ಭಂಡಾರಿಗೆ ಗಂಭೀರ ಗಾಯಗಳಾಗಿವೆ.
ಬಾಳೆಗುಳಿ ರಸ್ತೆಯ ಮೇಲೆ ಅತಿಯಾದ ಪ್ರಮಾಣದಲ್ಲಿ ಮಳೆ ನೀರು ಹರಿಯುತ್ತಿರುವುದ್ರಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗ್ತಿದೆ. ಕಾರವಾರದ ಸಭೆಗೆ ಹೊರಟಿದ್ದ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಅಂಕೋಲಾ ತಾಲೂಕಾಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳನ್ನ ಮಣಿಪಾಲ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲೈ ಮುಗಿಲನ್, ಅಂಕೋಲಾ ಸಿಪಿಐ ಸಂತೋಶ ಶೆಟ್ಟಿ, ಪಿಎಸ್ಐ ಪ್ರವೀಣಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.