ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಭಾನುವಾರ ಸಂಜೆ ಗುಜರಾತಿನ ಮೊರ್ಬಿಯಲ್ಲಿನ ಶತಮಾನದ ಹಳೆಯದಾದ ಸೇತುವೆ ಕುಸಿದು ಬಿದ್ದು 60 ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಸೇತುವೆ ದುರಸ್ಥಿ ಸಲುವಾಗಿ ಒಂದು ತಿಂಗಳ ಕಾಲ ಪ್ರವೇಶ ನಿಲ್ಲಿಸಲಾಗಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಪುನಃ ಪ್ರಾರಂಭವಾಗಿದ್ದ ಸೇತುವೆ ಕುಸಿದಿದೆ.
ಕೇಬಲ್ ಸೇತುವೆಯ ದುರಂತಕ್ಕೆ ಸಂಬಂಧಿಸಿದಂತೆ ಎಲ್ಲಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ನೈತಿಕ ಹೊಣೆ ಹೊತ್ತು ಸಿಎಂ ಭೂಪೇಂದ್ರ ಪಟೇಲ್ ಅಥವ ಗೃಹ ಸಚಿವ ಹರ್ಷ ಸಾಂಗವಿ ಅವರೇನಾದರೂ ರಾಜೀನಾಮೆ ನೀಡುತ್ತಾರಾ ಅನ್ನೋ ಪ್ರಶ್ನೆ ಇದೆ. ಈ ಹಿಂದೆ ದೇಶದಲ್ಲಿ ನಡೆದ ಹಲವು ಅನಾಹುತಗಳಲ್ಲಿ ರಾಜ್ಯ, ಕೇಂದ್ರ ಸಚಿವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆ ರೀತಿ ಗುಜರಾತಿನಲ್ಲಿ ನಡೆಯುತ್ತಾ ಅನ್ನೋ ಪ್ರಶ್ನೆ ಇದೆ.
ಇನ್ನೇನು ಕೆಲವು ತಿಂಗಳಲ್ಲಿ ಗುಜರಾತಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಘಟನೆ ಆಡಳಿತರೂಢ ಬಿಜೆಪಿ ವಿರುದ್ಧ ತಂತ್ರ ಹೆಣೆಯಲು ವಿಪಕ್ಷಗಳು ಅಸ್ತ್ರವಾಗಬಹುದು.