ಪ್ರಜಾಸ್ತ್ರ ಸುದ್ದಿ
ರಾಯಚೂರು: ಸಂಪುಟ ವಿಸ್ತರಣೆ ಆಗ್ತಿದ್ದಂತೆ ರಾಜ್ಯ ಸರ್ಕಾರದಲ್ಲಿ ಆಕ್ರೋಶ ಬುಗಿಲೆದ್ದಿದೆ. ಹಲವಾರು ಬಿಜೆಪಿ ಶಾಸಕರು ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಗುಡುಗಿದ್ದಾರೆ. ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಧಾರವಾಡ ಶಾಸಕ ಅರವಿಂದ ಬೆಲ್ಲದ, ಹೊನ್ನಳ್ಳಿ ಶಾಸಕ ಎಂ.ಪಿ ರೇಣುಕಾಚಾರ್ಯ, ರಾಜರಾಜೇಶ್ವರಿನಗರ ಶಾಸಕ ಮುನಿರತ್ನ, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ ಸೇರಿದಂತೆ ಅನೇಕರು ಅಪಸ್ವರ ತಗೆದಿದ್ದಾರೆ.
ಈ ಬಗ್ಗೆ ರಾಯಚೂರಿನಲ್ಲಿ ಮಾತ್ನಾಡಿರುವ ಹೆಚ್.ವಿಶ್ವನಾಥ, ಸಿಎಂ ಮಾತಿಗೆ ತಪ್ಪಿದ್ದಾರೆ ಎಂದು ಬುಧವಾರದಿಂದಲೇ ಕಿಡಿ ಕಾರುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಪುತ್ರ ವ್ಯಾಮೋಹದಿಂದಲೇ ನಾಶವಾಗಿವೆ. ಬಿಜೆಪಿ ಸಹ ಅದೆ ಹಾದಿ ಹಿಡಿಯಲಿದೆ. ಬಿಜೆಪಿಗೆ ಈಗ ಸನ್ ಸ್ಟ್ರೋಕ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ರು.
ಭ್ರಷ್ಟರಿಗೆ ಯಾಕೆ ಮಣೆ ಹಾಕಲಾಗ್ತಿದೆ ಗೊತ್ತಿಲ್ಲ. ರಮೇಶ ಜಾರಕಿಹೊಳಿ ಯಾಕೆ ಸಪೋರ್ಟ್ ಮಾಡ್ತಿದ್ದಾರೆ ಅದು ಗೊತ್ತಿಲ್ಲ. ದಲಿತ ನಾಯಕ ಹೆಚ್.ನಾಗೇಶ ರಾಜೀನಾಮೆ ಯಾಕೆ? ಹಿಂದುಳಿದ ವರ್ಗದ ಮುನಿರತ್ನ ಅವರನ್ನ ಕಡೆಗಣಿಸಿದ್ದು ಯಾಕೆ? ಸಂಕ್ರಮಣದ ನಂತರ ಒಬ್ಬೊಬ್ಬರು ಸಿಡಿ ಬಿಡುಗಡೆ ಮಾಡುತ್ತಾರೆ ಎಂದು ಗುಡುಗಿದ್ದಾರೆ.