ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಿಲಿಕಾನ್ ಸಿಟಿ ಉಗ್ರರ ಕೇಂದ್ರವಾಗಿದೆ ಎಂದು ಬಿಜೆಪಿಯ ಕೆಲ ಅಪ್ರಬುದ್ಧರ ಹೇಳಿಕೆಯಿಂದ ಬೆಂಗಳೂರಿಗೆ ಮಾಡಿದ ಅಪಮಾನವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಬೆಂಗಳೂರು ನಮ್ಮೆಲ್ಲರ ಹೆಮ್ಮೆ. ಕ್ಷುಲ್ಲಕ ಕಾರಣಕ್ಕೆ ಬೆಂಗಳೂರನ್ನು ಅಪಮಾನಗೊಳಿಸುವ ಹೇಳಿಕೆ ಅಪರಾಧವೆ ಸರಿ. ಈ ಹೇಳಿಕೆಗೆ ಬಿಜೆಪಿ ಕ್ಷಮೆ ಕೇಳಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ನಮ್ಮ ಹೇಳಿಕೆ ಉಗ್ರರ ವಿರುದ್ಧ ಇರಬೇಕು. ಅನೇಕರಿಗೆ ಅನ್ನ, ಆಶ್ರಯ ನೀಡಿರುವ ತಾಯಿಯಂತಿರುವ ಊರಿನ ಬಗ್ಗೆ ಅಲ್ಲ. ಬೆಂಗಳೂರಿನಲ್ಲಿ ಉಗ್ರರು ಸಿಕ್ಕರೆ ಅದು ಅವರದಲ್ಲ. ಬೆಂಗಳುರು ನಮ್ಮದು ಎಂದು ಹೆಚ್ಡಿಕೆ ಬಿಜೆಪಿಯ ಕೆಲ ಅಪ್ರಬುದ್ಧರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.