ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಎಂಎಲ್ ಸಿ ಸಿ.ಎಂ ಇಬ್ರಾಹಂ ಹೊಸದು ಹಾಗೂ ಇದು ಸಾಧ್ಯವೇ ಅನ್ನೋ ವಿಚಾರವನ್ನು ಹೇಳಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪನವರನ್ನು ಒಂದೇ ಪಕ್ಷಕ್ಕೆ ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ನಲ್ಲೂ ಅಲ್ಪಸಂಖ್ಯಾತರಿಗೆ ಸ್ಥಾನಮಾನವಿಲ್ಲ. ಮುಸ್ಲಿಂರಲ್ಲಿ ಯಾರೂ ನಾಯಕರಿಲ್ವಾ? ಸಿದ್ದರಾಮಯ್ಯನವರ ಜೊತೆಗೆ ಈ ಹಿಂದೆಯೇ ಈ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಆದ್ರೆ, ಇದು ಆಗದ ವಿಚಾರ ಅನ್ನೋದು ಜನರ ಅಭಿಪ್ರಾಯ. ಇಬ್ರಾಹಿಂ ಮಾತಿಗೆ ಕಾಲವೇ ಉತ್ತರಿಸಬೇಕಿದೆ.