ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ರಮೇಶ ಜಾರಕಿಹೊಳಿ, ಸಿಡಿಯಲ್ಲಿರುವುದು ನಾನೆ. ಸಹಮತದಿಂದ ಲೈಂಗಿಕತೆ ನಡೆಸಿದ್ದೇವೆ ಎಂದು ಹೇಳಿರುವುದು, ಪ್ರಕರಣದ ಆರೋಪಿಗಳಿಗೆ ಕಂಟಕವಾಗುವ ಸಾಧ್ಯತೆಯಿದೆ.
ಹೌದು, ಸಿಡಿ ಪ್ರಕರಣ ಕಿಂಗ್ ಪಿನ್ ಎಂದು ಹೇಳಲಾಗ್ತಿರುವ ನರೇಶ ಹಾಗೂ ಶ್ರವಣ ತಲೆಮರೆಸಿಕೊಂಡಿದ್ದಾರೆ. ಇದುವರೆಗೂ ಸಿಕ್ಕಿಲ್ಲ. ಇವರಿಬ್ಬರ ಮೇಲೆ ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅದು ಸಿಗೋದು ಅನುಮಾನ ಎನ್ನಲಾಗ್ತಿದೆ.
ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡದಂತೆ ಕೋರ್ಟ್ ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.