ನವದೆಹಲಿ: ಕಾಂಗ್ರೆಸ್ ನಿಂದ ಹೊರ ಬಂದು ಮಧ್ಯಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸಮ್ಮುಖದಲ್ಲಿ ಸಿಂಧಿಯಾ ಕಮಲ ಹಿಡಿದಿದ್ದಾರೆ.
ಜ್ಯೋತಿರಾಧಿತ್ಯ ಸಿಂಧಿಯಾ ಜೊತೆಗೆ 22 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಆದ್ರೆ, ಅವರು ನೇರವಾಗಿ ಬಂದು ಸಲ್ಲಿಸಿದ ಕಾರಣ, ಅವರ ರಾಜೀನಾಮೆ ಅಂಗೀಕಾರವಾಗಿಲ್ಲವೆಂದು ಹೇಳಲಾಗ್ತಿದೆ.
ರಾಹುಲ ಗಾಂಧಿ ಬಳಗದಲ್ಲಿ ಗುರುತಿಸಿಕೊಂಡಿದ್ದ ಯುವ ನಾಯಕ ಸಿಂಧಿಯಾ, ನಿನ್ನೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ ಶಾ ಭೇಟಿಯಾಗಿ ಬಂದಿದ್ರು. ಈ ಮೂಲಕ ಒಂದು ಕಾಲನ್ನ ಕಾಂಗ್ರೆಸ್ ನಿಂದ ಹೊರ ಇಟ್ಟಿದ್ರು. ಇಂದು ಪೂರ್ತಿಯಾಗಿ ಹೊರ ನಡೆದು ಬಿಜೆಪಿ ಮನೆ ಸೇರಿದ್ದಾರೆ.