ಕೇಸರಿ ಧ್ವಜದ ಹೇಳಿಕೆ ಕೊಡುವವರೆಲ್ಲ ದೇಶದ್ರೋಹಿಗಳು: ಡಿಕೆಶಿ

338

ಪ್ರಜಾಸ್ತ್ರ ಸುದ್ದಿ

ಮೈಸೂರು: ಕೇಸರಿ ಧ್ವಜ ರಾಷ್ಟ್ರಧ್ವಜ ಆಗಬೇಕು ಎಂದು ಹೇಳಿಕೆ ಕೊಡುವವರೆಲ್ಲ ರಾಷ್ಟ್ರದ್ರೋಹಿಗಳು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಸಚಿವ ಕೆ.ಎಸ್ ಈಶ್ವರಪ್ಪ ಬಳಿಕ ಕಲ್ಲಡ್ಕ ಪ್ರಭಾಕರ ಭಟ್ ಸಹ ಇದೆ ರೀತಿ ಹೇಳಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್, ಸಚಿವರು ಹೇಳಿಕೆ ಕೊಟ್ಟಾಗ ನಾವು ಸದನದಲ್ಲಿ ಪ್ರತಿಭಟಿಸಿದ್ದೇವೆ. ಇದೀಗ ಕಲ್ಲಡ್ಕ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲವೆಂದರು. ಬಿಜೆಪಿ ಅವರ ಸಿದ್ಧಾಂತದ ಮೇಲೆ ಹೋಗುತ್ತದೆ. ನಾವು ಜನರ ಸಮಸ್ಯೆ, ಬೆಲೆ ಏರಿಕೆ, ನಿರುದ್ಯೋಗ ಮುಂದಿಟ್ಟುಕೊಂಡು ಚುನಾವಣೆ ಮಾಡುತ್ತೇವೆ ಎಂದರು.




Leave a Reply

Your email address will not be published. Required fields are marked *

error: Content is protected !!