ಗುರ್ದಾಸ್ ಪುರ: ಭಾರತ ಮತ್ತು ಪಾಕಿಸ್ತಾನ ಕರ್ತಾರ್ ಪುರ ಕಾರಿಡಾರ್ ನ ಕಾರ್ಯಾಚರಣೆಯ ಒಪ್ಪಂದಕ್ಕೆ ಸಹಿ ಹಾಕಿದ್ವು. ಈ ಯಾತ್ರೆ ವೀಸಾ ಮುಕ್ತವಾಗಿದ್ದು, ಪಾಸ್ ಪೋರ್ಟ್ ತೆಗೆದುಕೊಂಡು ಹೋಗಬೇಕು.
ಮುಂಜಾನೆಯಿಂದ ಸಂಜೆಯವರೆಗೂ ಯಾತ್ರೆಗೆ ಅವಕಾಶ ಇರುತ್ತೆ. ಆದ್ರೆ, ಯಾತ್ರಿಕರು ಅಂದೆ ವಾಪಸ್ ಆಗಬೇಕು. ಕೆಲ ಅಧಿಸೂಚಿತ ದಿನಗಳನ್ನ ಬಿಟ್ಟು ಉಳಿದ ದಿನ ಕಾರ್ಯನಿರ್ವಹಿಸುತ್ತೆ. ಒಪ್ಪಂದದ ಅನುಸಾರ ಯಾತ್ರಿಕರ ಪಟ್ಟಿಯನ್ನ ಯಾತ್ರೆಗೂ 10 ದಿನ ಮೊದಲು ಕಳುಹಿಸಲಾಗುತ್ತೆ. ಪಾಕಿಸ್ತಾನದಲ್ಲಿರುವ ಬಾಬಾ ನಾನಕ್ ಅವರ ದರ್ಶನ ಹಾಗೂ ಪ್ರಸಾದದ ವ್ಯವಸ್ಥೆಯನ್ನ ಪಾಕಿಸ್ತಾನ ನೋಡಿಕೊಳ್ಳಲಿದೆ ಎಂದು ಗೃಹ ಸಚಿವಾಲು ತಿಳಿಸಿದೆ.
2018 ನವೆಂಬರ್ 22ರಂದು ಗುರು ನಾನಾಕ್ ದೇವ್ ಅವರ 550ನೇ ಜನ್ಮ ಶತಮಾನೋತ್ಸವವನ್ನ ಅದ್ಧೂರಿಯಾಗಿ ಆಚರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಭಾರತೀಯ ಯಾತ್ರಿಕರು ಗುರುದ್ವಾರ ದರ್ಬಾರ್ ಸಾಹೇಬ್ ಗೆ ಭೇಟಿ ನೀಡಲು ಅನುಕೂಲವಾಗುವಂತೆ ದೇರಾ ಬಾಬಾ ನಾನಕ್ ನಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಕರ್ತಾರ್ ಪುರ ಕರಿಡಾರ್ ನಿರ್ಮಿಸಲು ನಿರ್ಧರಿಸಲಾಗಿತ್ತು.