ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸಚಿವ ಕೆ.ಎಸ್ ಈಶ್ವರಪ್ಪ ವಜಾ ಮಾಡಬೇಕೆಂದು ಈಗಾಗ್ಲೇ ಕಾಂಗ್ರೆಸ್ ಸದಸ್ಯರು ಉಭಯ ಸದನಗಳಲ್ಲಿ ಧರಣಿ ನಡೆಸಿದ್ದಾರೆ. ಅಹೋರಾತ್ರಿ ಧರಣಿ ಸಹ ನಡೆಸಿದ್ದು, ಕಳೆದ ಶುಕ್ರವಾರ ಕಲಾಪವನ್ನು ಇಂದು ಮುಂಜಾನೆ 11 ಗಂಟೆಗೆ ಮುಂದೂಡಲಾಗಿತ್ತು, ಇಂದು ಮತ್ತೆ ಧರಣಿ ಮುಂದುವರೆಯುವ ಸಾಧ್ಯತೆಯಿದೆ.
ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರೆ ನೀಡಿದ್ದಾರೆ. ಈಶ್ವರಪ್ಪ ವಜಾ ಮಾಡುವ ತನಕ ತಮ್ಮ ಹೋರಾಟ ನಿಲ್ಲದ ಎಂದಿದ್ದಾರೆ. ಇದರ ನಡುವೆ ಫೆಬ್ರವರಿ 25ರಂದು ಕಾಂಗ್ರೆಸ್ ಘಟಾನುಘಟಿ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಅಷ್ಟರೊಳಗೆ ಈಶ್ವರಪ್ಪ ವಿರುದ್ಧದ ಹೋರಾಟ ಏನಾಗುತ್ತೆ ಅನ್ನೋ ಕುತೂಹಲವಿದೆ.