ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಣವಿ ಅವರಿಗೆ ಶ್ರದ್ಧಾಂಜಲಿ

219

ಪ್ರಜಾಸ್ತ್ರ ಸುದ್ದಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ, ಹಿರಿಯ ಕವಿ ನಾಡೋಜ ಡಾ.ಚನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಕುಲಪತಿ ಪ್ರೊ.ಕೆ.ಬಿ ಗುಡಸಿ, ಕವಿವಿ ಪ್ರಸಾರಾಂಗದ ಮೂದಲ ನಿರ್ದೇಶಕರಾಗಿ ಪ್ರಸಾರಾಂಗಕ್ಕೆ ಹೊಸ ಚೈತನ್ಯವನ್ನು ನೀಡಿದ ಶಕ್ತಿ ಚನ್ನವೀರ ಕಣವಿ ಅವರಿಗೆ ಸಲ್ಲುತ್ತದೆ ಎಂದರು.

ಸಾಹಿತಿಗಳಲ್ಲಿ ಡಾ.ಚನ್ನವೀರ ಕಣವಿ ಅವರು ವಿಭಿನ್ನವಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಅವರ ಋಣ ವಿಶ್ವವಿದ್ಯಾಲಯದ ಮೇಲೆ ಇದೆ. ಕವಿವಿ ಅವರ ಸೇವೆಯನ್ನು ಸದಾ ಸ್ಮರಣಿಸುತ್ತದೆ ಎಂದರು. ಇದೆ ವೇಳೆ ಕಣವಿ ಅವರ ಕುರಿತು ವಾರ್ತಾ ಇಲಾಖೆ ನಿರ್ಮಿಸಿದ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.

ಕಣವಿ ಅವರ ಸಾಕ್ಷ್ಯ ಚಿತ್ರ ವೀಕ್ಷಣೆ

ಸಂತಾಪ ಸೂಚಕ ಗೊತ್ತುವಳಿಯನ್ನು ಕವಿವಿ ಪ್ರಸಾರಾಂಗದ ನಿರ್ದೇಶಕ ಡಾ.ಚಂದ್ರಶೇಖರ ರೊಟ್ಟಿಗವಾಡ ಪ್ರಸ್ತುತ ಪಡಿಸಿದರು. ಕವಿವಿ ಕುಲಸಚಿವರಾದ ಡಾ.ಕೆ.ಟಿಹನುಮಂತಪ್ಪ, ಮೌಲ್ಯಮಾಪನ ಕುಲಸಚಿವರಾದ ಡಾ.ನಾಗರಾಜ್ ಹೆಚ್, ಹಣಕಾಸು ಅಧಿಕಾರಿಗಳಾದ ಗೀತಾ ಯರಶೀಮೆ, ಪ್ರಸಾರಾಂಗದ ಅಧಿಕಾರಿಗಳು, ವಿಶ್ವವಿದ್ಯಾಲಯದ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ, ಕವಿವಿಯ ಅಧಿಕಾರಿಗಳು ಸಂತಾಪ ಸೂಚಕ ಸಭೆಯಲ್ಲಿ ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!