ಕೇಸರಿ ಬಾವುಟ ವಿಚಾರ: ಸದನದಲ್ಲಿ ಲೇ.. ನಿಮ್ಮಪ್ಪ.. ಪದ ಬಳಕೆ

256

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮುಂದೆ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸಬಹುದು ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ, ಸದನದಲ್ಲಿ ಕಾಂಗ್ರೆಸ್ ನಾಯಕರು ನಿಲುವಳಿ ಮಂಡಿಸಲು ಮುಂದಾಗಿದ್ದರು. ಈ ವಿಚಾರ ಇಂದು ಗದ್ದಲ ಗಲಾಟೆಗೆ ದಾರಿಯಾಗಿ ಏಕವಚನದಲ್ಲೇ ಬೈದಾಡಿಕೊಂಡಿದ್ದಾರೆ.

ಕೆ.ಎಸ್ ಈಶ್ವರಪ್ಪ, ಮಾಧುಸ್ವಾಮಿ ಸೇರಿದಂತೆ ಇತರೆ ಸಚಿವರು, ಬಿಜೆಪಿ ಶಾಸಕರು ಕಾಂಗ್ರೆಸ್ ಶಾಸಕರ ಮೇಲೆ ಮುಗಿಬಿದ್ದರು. ಈ ವೇಳೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ, ಯು.ಟಿ ಖಾದರ್, ಖರ್ಗೆ, ಹೆಚ್.ಕೆ ಪಾಟೀಲ ವಾಗ್ದಾಳಿ ನಡೆಸಿದರು. ಈ ಡಿ.ಕೆ ಶಿವಕುಮಾರ ದೇಶದ್ರೋಹದ ಮಾತುಗಳನ್ನಾಡಿದವರ ಮಾತುಗಳನ್ನು ಏನು ಕೇಳೋದು ಸರ್ ಎನ್ನುತ್ತಾ ಲೇ ಈಶ್ವರಪ್ಪ ನೀನೊಬ್ಬ ದೇಶದ್ರೋಹಿ ಎಂದರು.

ಡಿಕೆಶಿ ಮಾತಿಗೆ ಕೆರಳಿದ ಈಶ್ವರಪ್ಪ, ದೇಶದ್ರೋಹಿ ನಾನಲ್ವೋ, ನಿಮ್ಮಪ್ಪ, ನಿಮ್ಮ ತಾತ.. ನೀನಿನ್ನೂ ಬೇಲ್ ಮೇಲೆ ಹೊರಗೆ ಇದಿಯಾ ನೆನಪಿರಲಿ ಎಂದು ವಾಗ್ದಾಳಿ ನಡೆಸಿದರು. ಹೀಗೆ ಸದನದಲ್ಲಿ ವೈಯಕ್ತಿಯವಾಗಿ ಮಾತನಾಡಲು ಶುರು ಮಾಡಿದರು. ಸ್ಪೀಕರ್ ಕಾಗೇರಿ ಅವರು ಎಷ್ಟು ಹೇಳಿದರೂ ಯಾರು ಸುಮ್ಮನಾಗಲಿಲ್ಲ. ಹೀಗಾಗಿ ಸದನ ಮುಂದೂಡುತ್ತಲೇ ಹೋದರು.




Leave a Reply

Your email address will not be published. Required fields are marked *

error: Content is protected !!