ಊರಿಗೆ ಬಂದು ಸಿಕ್ಕಿಬಿದ್ದ ಚಿರತೆ

350

ಪ್ರಜಾಸ್ತ್ರ ಸುದ್ದಿ

ಕುಕನೂರ: ಗ್ರಾಮಸ್ಥರಲ್ಲಿ ಸಾಕಷ್ಟು ಆತಂಕ ಮೂಡಿಸಿದ್ದ ಚಿರತೆ ಕಡೆಗೂ ಬೋನಿಗೆ ಬಿದ್ದಿದೆ. ಇದ್ರಿಂದಾಗಿ ಊರಿನ ಜನರು ಒಂದಿಷ್ಟು ನಿಟ್ಟುಸಿರು ಬೀಡುವಂತಾಗಿದೆ. ಅಂದ್ಹಾಗೆ ಈ ಚಿರತೆ ಕಂಡು ಬಂದಿದ್ದು, ಕೊಪ್ಪಳ ಜಿಲ್ಲೆ ಕುಕನೂರ ತಾಲೂಕಿನ ಗಾವರಳ ಗ್ರಾಮದ ಹತ್ತಿರ.

ಗಾವರಳ ಗ್ರಾಮದ ಸಮೀಪದಲ್ಲಿ ಗುಡ್ಡುಗಾಡು ಪ್ರದೇಶವಿದೆ. ಹೀಗಾಗಿ ಅಲ್ಲಿಂದ ಈ ಚಿರತೆ ಬಂದಿದೆ ಎನ್ನಲಾಗ್ತಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದು ಚಿರತೆ ಸೆರೆ ಸಿಕ್ಕಿದೆ. ಈ ವೇಳೆ ಆರ್ ಎಫ್ಒ ಅಂದಪ್ಪ ಕುರಿ, ಮಹಮದ ಶರೀಫ ಕೊತ್ವಾಲ, ಹೊನ್ನಪ್ಪ ಮರಡಿ ಹಾಗೂ ಕುಕನೂರು ಪಿಎಸ್ಐ ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!