ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲಾಕ್ ಡೌನ್ ಖಿನ್ನತೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸಿಲಿಕಾನ್ ಸಿಟಿಯಲ್ಲಿ ಮಂಗಳವಾರ ನಡೆದಿದೆ. 15 ಅಂತಸ್ತಿನ ಕಟ್ಟಡದಿಂದ 60 ವರ್ಷದ ವ್ಯಕ್ತಿಯೊರು ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೋರಮಂಗಲದ ನಿವಾಸಿ 60 ವರ್ಷದ ವಿವೇಕ ಮಧುಸೂದನ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂಟಿಯಾಗಿ ವಾಸವಾಗಿದ್ದ ವಿವೇಕ ಮಧುಸೂದನ ಕಳೆದ ಹಲವು ದಿನಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ರು ಎಂದು ಹೇಳಲಾಗ್ತಿದೆ.