ಬೆಂಗಳೂರು: ಡೆಡ್ಲಿ ಕರೋನಾದ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಾದ ಹೊತ್ತಿನಲ್ಲಿ, ಕೇವಲ ಸ್ವಾರ್ಥಕ್ಕೆ ಜೋತುಬಿದ್ದ ಜನರಿಂದ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಏರಿಕೆಯಾಗ್ತಿದೆ. ಇದಕ್ಕೆ ಕಾರಣ ಸರ್ಕಾರದ ಲಾಕ್ ಡೌನ್ ಸಡಿಲಿಕೆ ಕಾರಣವೆಂದು ಪ್ರಜಾಸ್ತ್ರ ನಿನ್ನೆಯಷ್ಟೇ ಸುದ್ದಿ ಮಾಡಿತ್ತು. ಸರ್ಕಾರ ಒಂದೊಳ್ಳೆ ದೃಷ್ಟಿಯಿಂದ ಸಡಿಲಿಕೆ ಮಾಡಿದ್ರೆ, ಸಾರ್ವಜನಿಕರು ಅದನ್ನ ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಇದೆ ವಿಚಾರವನ್ನ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ಲಾಕ್ ಸಡಿಲಿಕೆ ಜೊತೆಗೆ ರಾಜ್ಯ ಸರ್ಕಾರ ಏನೆಲ್ಲ ಯಡವಟ್ಟುಗಳನ್ನ ಮಾಡಿದೆ ಅನ್ನೋದನ್ನ ಸಹ ಹೇಳಿತ್ತು. ಇದಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಲು ಲಾಕ್ ಡೌನ್ ಸಡಿಲಿಕೆ ಕಾರಣವೆಂದು ಹೇಳಿದ್ದಾರೆ.
ಲಾಕ್ ಡೌನ್ ಸಡಿಲಿಕೆ ಬಳಿಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಜನರ ಓಡಾಟ ಎಂದಿನಂತೆ ಕಂಡು ಬರ್ತಿದೆ. ಇದು ಮತ್ತಷ್ಟು ಆತಂಕ ಮೂಡಿಸಿದ್ದು, ಹೀಗೆ ಮುಂದುವರೆದ್ರೆ ಸೋಂಕಿನ ಪ್ರಕರಣಗಳು ಇನ್ನು ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.