ಪ್ರಜಾಸ್ತ್ರ ಅಪರಾಧ ಸುದ್ದಿ
ಮಂಗಳೂರು: ಒಂಟಿ ಪೊಲೀಸರನ್ನೇ ಟಾರ್ಗೆಟ್ ಮಾಡಿ, ಅವರ ಮೇಲೆ ಹಲ್ಲೆ ಮಾಡುವುದು ಹಾಗೂ ಕೊಲೆ ಮಾಡುವ ಗುಂಪೊಂದನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇದನ್ನ ಮಾಯಾ ಗ್ಯಾಂಗ್ ಎನ್ನಲಾಗ್ತಿದ್ದು, ಇದರಲ್ಲಿ ಇನ್ನೂ ಮೀಸೆ ಮೂಡದ ಚಿಲ್ಟುಗಳಿದ್ದಾರೆ.
ಕಳೆದ ವರ್ಷ ನಡೆದ ಸಿಎಎ ಹಾಗೂ ಎನ್ಆರ್ ಸಿ ವಿರೋಧಿ ಹೋರಾಟದಲ್ಲಿ ಹಿಂಸಾಚಾರ ನಡೆದಿತ್ತು. ಈ ವೇಳೆ ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಇಬ್ಬರು ಮೃತಪಟ್ಟಿದ್ದರು. ಇದರ ಪ್ರತೀಕವಾಗಿಯೇ ಹುಟ್ಟುಕೊಂಡಿದ್ದೇ ಮಾಯಾ ಗ್ಯಾಂಗ್. ಇದೀಗ ಈ ಗ್ಯಾಂಗ್ ನ 6 ಜನ ಸದಸ್ಯರು ಅಂದರ್ ಆಗಿದ್ದಾರೆ.
ಉತ್ತರ ಪೊಲೀಸ್ ಠಾಣೆ ಸಿಬ್ಬಂದಿ ಗಣೇಶ ಮೇಲೆ ಹಲ್ಲೆ ಮಾಡಲಾಗಿತ್ತು. ತಣ್ಣೀರು ಬಾವಿ, ಪೆಣಂಬೂರು ಬಳಿ ಪೊಲೀಸರ ರೈಫಲ್ ಕಸೆದುಕೊಳ್ಳುವ ಪ್ರಯತ್ನ ನಡೆಸಿದ್ದರ ಹಿಂದೆ ಮಾಯಾ ಗ್ಯಾಂಗ್ ಇತ್ತು. ಅಪ್ರಾಪ್ತರಿಗೆ ಶಿಕ್ಷೆ ಕಡಿಮೆ, ಜಾಮೀನು ಬೇಗ ಸಿಗುತ್ತೆ ಅನ್ನೋ ಕಾರಣಕ್ಕೆ ಇವರ ಬಳಕೆ ಮಾಡಲಾಗಿದೆ. ಇವರಿಗೆ ನಿಟ್ರಾವಿಟ್ ಅನ್ನೋ ಡ್ರಗ್ಸ್ ನೀಡಲಾಗ್ತಿತ್ತು ಅನ್ನೋ ಅಂಶ ಬೆಳಕಿಗೆ ಬಂದಿದೆ.