ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅತಿ ವೇಗವಾಗಿ ಕಾರು ಚಲಾಯಿಸಿದಕ್ಕೆ ತಡೆದ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಅವರಿಗೆ ಅವಾಜ್ ಹಾಕಿದ ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಪುತ್ರಿ ಪರವಾಗಿ ತಂದೆ ಕ್ಷಮೆ ಕೇಳಿದ್ದಾರೆ.
ಶುಕ್ರವಾರ ಸಂಜೆ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಲಿಂಬಾವಳಿ, ಅವರ ಸ್ನೇಹಿತರ ಜೊತೆಗೆ ಮಗಳು ಹೋಗುವಾಗ ಸಣ್ಣ ಘಟನೆ ನಡೆದಿದೆ. ಯಾರೇ ತಪ್ಪು ಮಾಡಿದರೂ ತಪ್ಪಿಗೆ ಏನು ಶಿಕ್ಷೆಯಾಗಬೇಕು ಅದಾಗಬೇಕು. ಅದರಂತೆ ದಂಡ ಕಟ್ಟಲಾಗಿದೆ. ನನ್ನ ಮಗಳ ವರ್ತನೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮಿಸಿ ಎಂದಿದ್ದಾರೆ.