ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ವಿಧಾನ ಪರಿಷತ್ ಚುನಾವಣೆ ಟಿಕೆಟ್ ಕೈ ತಪ್ಪಿದಕ್ಕೆ ಹಲವು ಪ್ರಶ್ನೆಗಳು ಇದ್ದವೆ. ಈ ಬಗ್ಗೆ ಬಿಜೆಪಿ ನಾಯಕರ ಹಲವು ಮಾತುಗಳನ್ನು ಹೇಳುತ್ತಿದ್ದಾರೆ. ಇದೀಗ ಸ್ವತಃ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಟಿಕೆಟ್ ತಪ್ಪಿದ್ದಕ್ಕೆ ಬಿ.ಎಸ್ ಸಂತೋಷ್ ಕಾರಣರಲ್ಲ. ಮುಂದೆ ಎಂಎಲ್ಎ ಟಿಕೆಟ್ ಕೊಡುತ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಲ್ಲಿ ಸಾವಿರಾರು ಕಾರ್ಯಕರ್ತರಿದ್ದಾರೆ. 20 ಜನರ ಲಿಸ್ಟ್ ಕಳುಹಿಸಿದ್ದೇವು. ಅದರಲ್ಲಿ ನಾಲ್ಕು ಜನರನ್ನು ಮಾತ್ರ ಆಯ್ಕೆ ಮಾಡಬೇಕಿತ್ತು. ಅದನ್ನು ಹೈಕಮಾಂಡ್ ಮಾಡಿದೆ. ನನಗೆ ಟಿಕೆಟ್ ಸಿಗದಕ್ಕೆ ಹಲವರಿಗೆ ಬೇಸರವಿದೆ. ಪರಿಷತ್ ಟಿಕೆಟ್ ಸಿಕ್ಕಿಲ್ಲಂದರೆ ಎಲ್ಲವೂ ಮುಗಿಯಿತು ಅಂತಲ್ಲ. ರಾಜಕಾರಣಕ್ಕೆ ಅಂಬೆಗಾಲು ಇಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಉತ್ತಮ ಜವಾಬ್ದಾರಿ ನೀಡಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.