ನೋವಿನಲ್ಲಿದ್ದರೂ ಅಭಿವೃದ್ಧಿ ನಿಲ್ಲುವುದಿಲ್ಲ: ಪ್ರಧಾನಿ

473

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಉತ್ತರ ಪ್ರದೇಶದ ಬಲರಾಮಪುರದಲ್ಲಿನ ಸರಯೂ ಕಾಲುವೆ ರಾಷ್ಟ್ರೀಯ ಯೋಜನೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ದೇಶ ತುಂಬಾ ನೋವಿನಲ್ಲಿದೆ. ಆದರೆ, ಅಭಿವೃದ್ಧಿ ನಿಲ್ಲುವುದಿಲ್ಲ. ದೇಶದ ಒಳಗಿನ ಹಾಗೂ ಹೊರಗಿನ ಸವಾಲು ಎದುರಿಸಲು ಸಿದ್ಧ ಎಂದರು.

ಇನ್ನು ಈ ಯೋಜನೆ 9,800 ಕೋಟಿ ರೂಪಾಯಿ ವೆಚ್ಚದ ಯೋಜನೆಯಾಗಿದೆ. ಕಳೆದ 4 ವರ್ಷಗಳಲ್ಲಿ 4,600 ಕೋಟಿ ಬಳಕೆ ಮಾಡಲಾಗಿದೆ. ಈ ಯೋಜನೆ 14 ಲಕ್ಷ ಹೆಕ್ಟೇರ್ ಪ್ರದೇಶದ ಭೂಮಿಗೆ ನೀರುಣಿಸಲಿದೆ. ಇದಕ್ಕಾಗಿ ಘಾಗ್ರಾ, ಸರಯೂ, ರಫ್ತಿ, ಬಾಣಗಂಗಾ ಮತ್ತು ರೋಹಿಣಿ ನದಿಗಳ ಜೋಡಣೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!