ಗೆದ್ದವರು ಫೈನಲ್.. ಸೋತವರಿಗೊಂದು ಚಾನ್ಸ್..

249

ಪ್ರಜಾಸ್ತ್ರ ಕ್ರೀಡಾಸುದ್ದಿ

ದುಬೈ ಇಂಟರ್ ನ್ಯಾಷನ್ಲ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಮೊದಲ ಪ್ಲೇ ಆಫ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಗಾಯದಿಂದ ಚೇತರಿಸಿಕೊಂಡಿರುವ ರೋಹಿತ ಶರ್ಮಾ ಈಗಾಗ್ಲೇ ಮರಳಿದ್ದು, ಇಂದಿನ ಪಂದ್ಯದಲ್ಲಿಯೂ ಮುಂದುವರೆದಿದ್ದಾರೆ. ಟಾಪ್ 1ರಲ್ಲಿರುವ ಮುಂಬೈ ಇಂಡಿಯನ್ಸ್ ಟೀಂ 2ನೇ ಸ್ಥಾನದಲ್ಲಿರುವ ಡೆಲ್ಲಿ ಟೀಂ ಎದುರಿಸ್ತಿದ್ದು, ಭಾರೀ ಕುತೂಹಲ ಮೂಡಿಸಿದೆ.

ಇಂದಿನ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶ ಮಾಡಲಿದೆ. ಸೋತ ತಂಡಕ್ಕೆ ಇನ್ನೊಂದು ಚಾನ್ಸ್ ಸಿಗಲಿದೆ. 3 ಹಾಗೂ 4ನೇ ಸ್ಥಾನದಲ್ಲಿ ಗೆದ್ದ ತಂಡದ ಜೊತೆಗೆ ಇಂದು ಸೋತ ಟೀಂ ಸೆಟಸಾಟ ನಡೆಸಬೇಕಾಗುತ್ತೆ. ಹೀಗಾಗಿ ಸೋತ ಟೀಂಗೆ ಮತ್ತೊಂದು ಅವಕಾಶವಿರುವುದು ಅಭಿಮಾನಿಗಳಿಗೆ ಒಂದಿಷ್ಟು ಸಮಾಧಾನ ನೀಡಲಿದೆ.




Leave a Reply

Your email address will not be published. Required fields are marked *

error: Content is protected !!