ಪ್ರಜಾಸ್ತ್ರ ಸುದ್ದಿ
ಮಂಡ್ಯ: ಮಹಿಳೆಯರಿಗೆ ಉಚಿತ ಬಸ್ ಯೋಜನೆ ಜಾರಿಗೆ ಬಂದಿದ್ದೆ ತಡ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್ ಗಳು ಫುಲ್ ರಶ್ ನಲ್ಲಿ ಬರುತ್ತಿವೆ. ಹೀಗಾಗಿ ಒಂದಲ್ಲ ಒಂದು ಅನಾಹುತ ನಡೆಯುತ್ತಲೇ ಇವೆ. ಇತ್ತೀಚೆಗೆ ಕೊಳ್ಳೇಗಾಲದಲ್ಲಿ ಬಸ್ ವೊಂದರ ಬಾಗಿಲು ಮುರಿದು ಹೋಗಿತ್ತು. ಈಗ ಮತ್ತೊಂದು ಬಸ್ಸಿನ ಬಾಗಿಲು ಮುರಿದಿದೆ.
ಇಂದು ಜಿಲ್ಲೆಯ ಮಳವಳ್ಳಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಹತ್ತುವಾಗ ನೂಕುನುಗ್ಗಲು ಆಗಿ ಬಸ್ ಬಾಗಿಲು ಮುರಿದಿದೆ. ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆ ಸೀಟು ಹಿಡಿಯಲು ಏಕಾಏಕಿ ನುಗ್ಗಿದ ಪರಿಣಾಮ ಬಸ್ ಬಾಗಿಲು ಮುರಿದಿದೆ.
ಒಂದು ಕಡೆ ಈ ಯೋಜನೆ ತಂದು ತಪ್ಪು ಮಾಡಿದರು ಅಂತಾ ಕೆಲ ಗಂಡ್ಮಕ್ಕಳು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಮತ್ತೊಂದು ಕಡೆ ಡಕೋಟಾ ಬಸ್ ಗಳಿವೆ. ಬಾಗಿಲು ಮುರಿದು ಬೀಳುತ್ತಿದ್ದರೆ ಬಸ್ ಸ್ಥಿತಿ ಹೇಗಿರಬೇಡ ಅಂತಾ ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ನಾರಿ ಶಕ್ತಿ ಯೋಜನೆಯಿಂದ ಒಂದಲ್ಲ ಒಂದು ಅನಾಹುತ ನಡೆಯುತ್ತಿವೆ.