ಎಲ್ಲೆಡೆ ನಾಗರ ಪಂಚಮಿ ಸಂಭ್ರಮ

256

ಪ್ರಜಾಸ್ತ್ರ ಸುದ್ದಿ

ವಿಜಯಪುರ: ನಾಡಿನ ತುಂಬಾ ಇಂದು ನಾಗರ ಪಂಚಮಿ ಹಬ್ಬದ ಸಂಭ್ರಮ ಜೋರಾಗಿದೆ. ಎರಡು ದಿನಗಳ ಕಾಲ ನಡೆಯುವ ಹೆಣ್ಣು ಮಕ್ಕಳ ಹಬ್ಬವೆಂದೇ ಇದು ಕರೆಸಿಕೊಳ್ಳುತ್ತೆ. ಗುರುವಾರ ಒಳಗಿನ ಹಾಲು ಎರೆದರೆ ಶುಕ್ರವಾರ ಹೊರಗಿನ ಹಾಲು ಎರೆಯಲಾಗಿದೆ.

ಜಿಲ್ಲೆಯ ತುಂಬಾ ಹಬ್ಬದ ಸಂಭ್ರಮ ಮನೆ ಮಾಡಿದ್ದು, ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ನಾಗಪ್ಪನಿಗೆ ಹಾಲು ಎರೆದ ಮೇಲೆ ಅಂಗನೂಲು ಕಟ್ಟಿಕೊಳ್ಳಲಾಗುತ್ತೆ.

ಇನ್ನು ಹಬ್ಬಕ್ಕೂ ಎರಡ್ಮೂರು ದಿನಕ್ಕೂ ಮೊದ್ಲೇ ಮನೆಯಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳನ್ನ ಮಾಡಲಾಗುತ್ತೆ. ಅವುಗಳನ್ನ ಇಂದು ಸಂಬಂಧಿಕರಿಗೆ, ಬಂಧು ಬಳಗದವರಿಗೆ ಹಂಚಲಾಗುತ್ತೆ. ಇನ್ನು ಹೆಣ್ಮಕ್ಕಳಿಗೆ ಕೊಬ್ಬರಿ ಕುಪ್ಪಸ ಕೊಡುವ ಸಂಪ್ರದಾಯ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿದ್ದು, ಒಂದು ವಾರಗಳ ಕಾಲ ಇದು ನಡೆಯುತ್ತೆ. ಈ ಮೂಲಕ ಗಂಡನ ಮನೆಯಲ್ಲಿರುವ ಒಡಹುಟ್ಟಿದವಳನ್ನ ಭೇಟಿಯಾಗಿ ಮಾತ್ನಾಡಿಕೊಂಡು ಬರಲು ಇದೊಂದು ಅವಕಾಶವಾಗಿದೆ.




Leave a Reply

Your email address will not be published. Required fields are marked *

error: Content is protected !!