ಪ್ರಜಾಸ್ತ್ರ ಅಪರಾಧ ಸುದ್ದಿ
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಬೋಳೆಗಾಂವ ಗ್ರಾಮದ 6 ವರ್ಷದ ಬಾಲಕಿ ಆಗಸ್ಟ್ 9ರಂದು ಕಾಣೆಯಾಗಿದ್ದಳು. ಇಂದು ಶವವಾಗಿ ಪತ್ತೆಯಾಗಿದ್ದಾಳೆ. ಗ್ರಾಮದ ಹತ್ತಿರದ ಜಮೀನುವೊಂದರಲ್ಲಿ ಬಾಲಕಿ ಶವ ಪತ್ತೆಯಾಗಿದ್ದು, ದುಷ್ಕರ್ಮಿಗಳು ನೇಣು ಬೀಗಿದು ಹತ್ಯೆ ಮಾಡಿದ್ದಾರೆ ಎನ್ನಲಾಗ್ತಿದೆ.
ಗ್ರಾಮದ ಹಣಮಂತದೇವರ ಮನೆಯ ಅಂಗಳದಲ್ಲಿ ಸಹೋದರಿಯರಿಬ್ಬರು ಆಟವಾಡುತ್ತಿದ್ದರು. ಬಳಿಕ ಓರ್ವ ಬಾಲಕಿ ಕಾಣೆಯಾಗಿದ್ದಾಳೆ. ಹೀಗೆ ಕಾಣೆಯಾದ ಬಳಿಕ ಶವವಾಗಿ ಪತ್ತೆಯಾಗಿದ್ದು, ಸ್ಥಳಕ್ಕೆ ಇಂಡಿ ಡಿವೈಎಸ್ಪಿ ಶ್ರೀಧರ ದಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೊರ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬಾಲಕಿಯ ಸಾವಿಗೆ ಕಾರಣವೇನು? ಯಾರು ಈ ದುಷ್ಕೃತ್ಯವನ್ನ ಮಾಡಿದ್ದಾರೆ ಏನು ಅನ್ನೋದರ ಕುರಿತು ಪೊಲೀಸರು ತನಿಖೆ ನಡೆಸ್ತಿದ್ದಾರೆ. ಏನು ಅರಿಯದ ಮಗಳನ್ನ ಕಳೆದುಕೊಂಡಿರುವ ಕುಟುಂಬದ ನೋವು ಮುಗಿಲು ಮುಟ್ಟಿದೆ.