ಪ್ರಜಾಸ್ತ್ರ ಕ್ರೀಡಾ ಸುದ್ದಿ
ಕೊಲಂಬೊ: ಸಿಂಹಳಿಯರ ನಾಡಿನಲ್ಲಿ ಟೀಂ ಇಂಡಿಯಾ ವಿಜೃಂಭಿಸುವ ಮೂಲಕ 8ನೇ ಬಾರಿಗೆ ಏಷ್ಯ ಕಪ್ ಮುಡಿಗೇರಿಸಿಕೊಂಡಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾದ ನಾಯಕ ದುಶನ್ ಶಂಕಾ ಲೆಕ್ಕಾಚಾರವನ್ನು ಮೊಹಮ್ಮದ್ ಸಿರಾಜ್ ಸಂಪೂರ್ಣ ಉಲ್ಟಾ ಮಾಡಿ ಬಿಸಾಕಿದ.
ಸಿರಾಜ್ ಮಾರಕ ದಾಳಿಗೆ 15.2 ಓವರ್ ಗಳಲ್ಲಿ ಕೇವಲ 50 ರನ್ ಗಳಿಗೆ ಸರ್ವಪತನ ಕಂಡಿತು. ಸಿರಾಜ್ 7 ಓವರ್ ಗಳಲ್ಲಿ 1 ಮಿಡನ್ ಓವರ್ ಮಾಡಿ 21 ರನ್ ನೀಡಿ 6 ವಿಕೆಟ್ ಗಳ ಗೊಂಚಲು ಪಡೆದರು. ಉಪ ನಾಯಕ ಹಾರ್ದಿಕ್ ಪಾಂಡೆ 3 ವಿಕೆಟ್ ಪಡೆದು ಸಾಥ್ ನೀಡಿದರು. ಬೂಮ್ರಾ 1 ವಿಕೆಟ್ ಪಡೆದರು.
51 ರನ್ ಗಳ ಅಲ್ಪ ಗುರಿಯನ್ನು 6.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಮುಟ್ಟಿ ಏಷ್ಯ ಕಪ್ 2023ರನ್ನು ಭಾರತ ಮುಡಿಗೇರಿಸಿಕೊಂಡಿತು. ಇಶಾನ್ ಇಶನ್ 23, ಗಿಲ್ 27 ರನ್ ಬಾರಿಸಿದರು. ಈ ಗೆಲುವಿನ ಮೂಲಕ 23 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡಿತು.
2000ನೇ ಇಸ್ವಿಯಲ್ಲಿ ಭಾರತ, ಶ್ರೀಲಂಕಾ, ಜಿಂಬಾಬ್ವೆ ತ್ರಿಕೋನ್ ಸರಣಿಯಲ್ಲಿ ಲಂಕಾ 299 ರನ್ ಗಳಿಸಿತ್ತು. ಇದನ್ನು ಬೆನ್ನು ಹತ್ತಿದ ಭಾರತ ಕೇವಲ 54 ರನ್ ಗಳಿಗೆ ಸರ್ವಪತನ ಕಂಡಿತ್ತು. ಇಂದು ಆ ಸೇಡು ತೀರಿಸಿಕೊಂಡಿತು. ಇನ್ನು ಭಾರತ ಈ ಮೊದಲು ಬಾಂಗ್ಲಾವನ್ನು 58 ರನ್ ಗಳಿಗೆ, ಜಿಂಬಾಬ್ವೆಯನ್ನು 65 ರನ್ ಗಳಿಗೆ ಕಟ್ಟಿ ಹಾಕಿತ್ತು. ಇದೀಗ ಲಂಕಾವನ್ನು ಕೇವಲ 50 ರನ್ ಗಳಿಗೆ ಆಲೌಟ್ ಮಾಡಿದೆ.
1990ರಲ್ಲಿ ಸಾರ್ಜಾದಲ್ಲಿ ಪಾಕಿಸ್ತಾನದ ವಾಕರ್ ಯೂನಿಸ್ 26 ರನ್ ಗಳಿಗೆ 6 ವಿಕೆಟ್ ಪಡೆದಿದ್ದರು. ಸಿರಾಜ್ 19 ರನ್ ಗಳಿಗೆ 6 ವಿಕೆಟ್ ಪಡೆದು ದಾಖಲೆ ಮುರಿದರು. ಸೌಥ್ ಆಫ್ರಿಕಾ ಎದುರು 2012ರಲ್ಲಿ 43 ರನ್ ಗಳಿಗೆ ಆಲೌಟ್ ಆಗಿದ್ದ ಲಂಕಾ ಭಾರತದ ಎದುರು ಇಂದು 50 ರನ್ ಗಳಿಗೆ ಸರ್ವಪತನ ಕಂಡಿದೆ. ಇನ್ನು ಫೈನಲ್ ಪಂದ್ಯದಲ್ಲಿ 266 ಬೌಲ್ ಗಳನ್ನು ಉಳಿಸಿಕೊಂಡು ಗೆದ್ದ ಭಾರತ ಹೊಸ ದಾಖಲೆ ಬರೆಯಿತು. ಆಸ್ಟ್ರೇಲಿಯಾ, ಇಂಗ್ಲೆಂಡ್, ಶ್ರೀಲಂಕಾ ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ 226 ಬೌಲ್ ಗಳಿಸಿ ಗೆಲುವು ಸಾಧಿಸಿತ್ತು.
ಏಷ್ಯ ಕಪ್ ಗೆದ್ದ ಭಾರತ ಜೋಶ್ ನಲ್ಲಿದೆ. ಮೊಹಮ್ಮದ್ ಸಿರಾಜ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು. ಕುಲದೀಪ್ ಯಾದವ್ ಪ್ಲೇಯರ್ ಆಫ್ ದಿ ಸಿರೀಸ್ ಆದರು.