ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಎಲ್ಲೆಡೆ ಇಂದು ಗೌರಿ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈಗಾಗ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮನೆಗಳಲ್ಲಿ ಸ್ಥಾಪನೆ ಮಾಡುವ ಗಣೇಶನನ್ನು ಭಕ್ತರು ತೆಗೆದುಕೊಂಡು ಹೋಗುತ್ತಿದ್ದಾರೆ.
ಕೆಲವು ಕಡೆ ಸೋಮವಾರ ಹಾಗೂ ಮತ್ತೆ ಕೆಲವು ಕಡೆ ಮಂಗಳವಾರ ಗಣೇಶ ಹಬ್ಬ ಮಾಡಲಾಗುತ್ತಿದೆ. ಇಂದು ಗಣೇಶ ತಾಯಿ ಗೌರಿಯನ್ನು ಪೂಜಿಸುವ ಮೂಲಕ ನಾಳೆ ಮಗನನ್ನು ಭೂಮಿಗೆ ಕಳಸಿಕೊಡಲಾಗುತ್ತೆ ಅನ್ನೋದು ಜನರ ನಂಬಿಕೆ. ಕೆಲವರು ಕಡೆ 5 ದಿನ, 7 ದಿನ, 9 ದಿನ ಹಾಗೂ 11 ದಿನಗಳ ಕಾಲ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತೆ.
ಸರ್ಕಾರದಿಂದ ಈಗಾಗ್ಲೇ ಪಿಒಪಿ ಗಣೇಶನ ಮೂರ್ತಿ ಬದಲು ಮಣ್ಣಿನ ಗಣಪತಿ ಪೂಜಿಸುವಂತೆ ಸೂಚಿಸಲಾಗಿದೆ. ಪಿಒಪಿ ಗಣೇಶನ ಮೂರ್ತಿಯಿಂದ ಪರಿಸರದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಇದರಿಂದ ಜೀವ ಸಂಕಲದ ಮೇಲೆ ದುಷ್ಪರಿಣಾಮವಾಗಲಿದೆ. ಹೀಗಾಗಿ ಪಿಒಪಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವವರು, ಮಾರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ, ಇದು ಎಷ್ಟರ ಮಟ್ಟಿಗೆ ಪಾಲನೆಯಾಗುತ್ತೆ ಅನ್ನೋದು ಮುಖ್ಯ.