ಹಬ್ಬ, ವಾರಂತ್ಯ ಬಂದರೆ ಜೇಬಿಗೆ ಕತ್ತರಿ ಹಾಕುವ ಬಸ್ ದರ

262

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಾಲು ಸಾಲು ಹಬ್ಬ, ವಾರಂತ್ಯ ಬಂದರೆ ಸಾಕು ಬಸ್ ಗಳಿಂದ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಸಿಲಿಕಾನ್ ಸಿಟಿಗೆ ಉದ್ಯೋಗಕ್ಕೆ ಬಂದು ನೆಲೆಸಿದವರು, ಹಬ್ಬದ ಸಂದರ್ಭದಲ್ಲಿ ಊರಿಗೆ ಹೊರಟರಿಗೆ ಬಸ್ಸಿಗಾಗಿಯೇ ಸಾವಿರಾರು ರೂಪಾಯಿ ನೀಡಬೇಕಾಗಿದೆ.

ಯಾವುದೇ ಸರ್ಕಾರ ಬಂದರೂ ಈ ಕುರಿತು ಖಾಸಗಿ ಬಸ್ ಮಾಲೀಕರೊಂದಿಗೆ ಸರಿಯಾಗಿ ಚರ್ಚಿಸಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿ ನಡೆದುಕೊಳ್ಳುವುದಿಲ್ಲ. ವಾರದ ಆರಂಭದಲ್ಲಿ ಒಂದು ದರ, ವಾರಂತ್ಯದಲ್ಲಿ ಒಂದು ದರ. ಒಂದು ಕಡೆ ಶಕ್ತಿ ಯೋಜನೆಯಿಂದ ನಷ್ಟ ಅಂತಾರೆ. ಇನ್ನೊಂದು ಕಡೆ ಅವರು ಹೇಳಿದ್ದೆ ರೇಟು.

ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳ ತೆರಳುವ ಖಾಸಗಿ ಬಸ್ ಗಳಲ್ಲಿ ಸಾಮಾನ್ಯವಾಗಿ ಒಂದು ಸಾವರಕ್ಕಿಂತ ಮೇಲೆ ದರವಿದೆ. ಹಬ್ಬ, ವಾರಂತ್ಯ ಬಂದರೆ ಅದು ಡಬಲ್ ಆಗುತ್ತಿದೆ. ಇದೀಗ ಗಣೇಶ ಹಬ್ಬ ವಾರಂತ್ಯದಲ್ಲಿ ಇರುವುದರಿಂದ 2 ಸಾವಿರದಿಂದ 3 ಸಾವಿರ ತನಕ ಒಬ್ಬೊಬ್ಬರಿಗೆ ತೆಗೆದುಕೊಳ್ಳುತ್ತಿವೆ. ಹೀಗಾಗಿ ಅದೆಷ್ಟೋ ಜನರು ಊರಿಗೆ ಹೋಗದೆ ಫೋನ್ ನಲ್ಲಿ ಕುಟುಂಬಸ್ಥರೊಂದಿಗೆ ಮಾತನಾಡಿ ಹಬ್ಬದ ಶುಭಾಶಯ ವಿನಿಮಯ ಮಾಡುವ ಸ್ಥಿತಿ ನಿರ್ಮಾಣವಾಗಿದೆ.




Leave a Reply

Your email address will not be published. Required fields are marked *

error: Content is protected !!