ಪ್ರಜಾಸ್ತ್ರ ಕ್ರೀಡಾ ಸುದ್ದಿ
ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ 41 ರನ್ ಗಳ ಅಂತರದಿಂದ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಈ ಮೂಲಕ ಏಷ್ಯ ಕಪ್ ಎತ್ತಿಕೊಳ್ಳಲು ಇನ್ನೊಂದು ಹಜ್ಜೆ ಬಾಕಿ ಇದೆ.
ಟಾಸ್ ಗೆದ್ದ ಬ್ಯಾಟಿಂಗ್ ತೆಗೆದುಕೊಂಡ ರೋಹಿತ್ ಶರ್ಮಾ ಪಡೆಯನ್ನು ಲಂಕಾ ಪಡೆಯ ಧುನಿತ್ ಹಾಗೂ ಚರಿತ್ ಮಾರಕ ಬೌಲಿಂಗ್ ನಿಂದಾಗಿ 213 ರನ್ ಗಳಿಗೆ ಕಟ್ಟಿ ಹಾಕಿದರು. ಧನಿತ್ 5, ಚರಿತ್ 4 ವಿಕೆಟ್ ಪಡೆದು ಮಿಂಚಿದರು. ಸಾಧರಣ ಗುರಿ ಬೆನ್ನು ಹತ್ತಿದ ದಸುನ್ ಶನಕಾ ತಂಡವನ್ನು ಭಾರತದ ಸಾಂಗಿಕ ಹೋರಾಟದಿಂದ 172 ರನ್ ಗಳಿಗೆ ಆಲೌಟ್ ಮಾಡಲಾಯಿತು.
ಧನಂಜಯ್ ಸಿಲ್ವಾ 41, ಧುನಿತ್ 42 ರನ್ ಹೊರತುಪಡಿಸಿದರೆ ಉಳಿದವರಿಗೆ ಬ್ಯಾಟಿಂಗ್ ಮಾಡಲು ಭಾರತದ ಬೌಲರ್ ಗಳು ಅವಕಾಶ ನೀಡಲಿಲ್ಲ. ಕುಲ್ದೀಪ್ ಯಾದವ್ 4, ಜಡೇಜಾ, ಬೂಮ್ರಾ ತಲಾ 2 ವಿಕೆಟ್, ಸಿರಾಜ್, ಪಾಂಡ್ಯೆ ತಲಾ 1 ಪಡೆದು ಗೆಲುವಿಗೆ ಕಾರಣರಾದರು.