ಪ್ರಜಾಸ್ತ್ರ ಸುದ್ದಿ
ವಿಜಯಪುರ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ಪಿ ಋಷಿಕೇಶ್ ಸೋನಾವಣೆ, ಇಂಡಿ ಎಸಿ ಅಭೀದ್ ಗದ್ಯಾಳ್ ಅವರು ಇಂಡಿ ಹಾಗೂ ಸಿಂದಗಿ ವ್ಯಾಪ್ತಿಯ ಚೆಕ್ ಪೋಸ್ಟ್ ಹಾಗೂ ಭದ್ರತಾ ಕೊಠಡಿಗಳಿಗೆ ಗುರುವಾರ ಭೇಟಿ ನೀಡಿದರು.
ಇಂಡಿ ತಾಲೂಕಿನ ಅಗರಖೇಡ ಹತ್ತಿರದ ಚಿಕ್ಕಮಣೂರು ಕ್ರಾಸ್ ಹಾಗೂ ಹಿಂಗಾಣಿ ಹತ್ತಿರ ಸ್ಥಾಪಿಸಿರುವ ಚೆಕ್ ಪೋಸ್ಟ್ ಮತ್ತು ಇಂಡಿ ಪಟ್ಟಣದಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಇನ್ನು ಸಿಂದಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ದೇವಣಗಾಂವ, ಮೋರಟಗಿ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿದರು. ಸಿಬ್ಬಂದಿ, ಅಧಿಕಾರಿಗಳು ಪಾಳೆಯ ಪ್ರಕಾರ ಕೆಲಸ ಮಾಡಬೇಕು. ಪ್ರತಿಯೊಂದು ವಾಹನ ತಪಾಸಣೆ ಮಾಡಬೇಕು. ಜೊತೆಗೆ ಸಿಬ್ಬಂದಿಗೆ ಕುಡಿಯುವ ನೀರು ಸೇರಿದಂತೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಇನ್ನು ಭದ್ರತಾ ಕೊಠಡಿಗಳಿಗೆ ಭೇಟಿ ಕೊಟ್ಟ ಅವರು, ಇವಿಎಂ ಭದ್ರತೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ಸಿಂದಗಿ ತಹಶೀಲ್ದಾರ್, ಆಲಮೇಲ ತಹಶೀಲ್ದಾರ್ ಹಾಜರಿದ್ದರು.