ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮುಂದಿನ ಮೂರು ದಿನಗಳಲ್ಲಿ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದೊಂದು ವಾರದಿಂದ ಸಂಜೆ ಮಳೆಯಾಗ್ತಿದ್ದು ವಾಹನ ಸವಾರರು ಪರದಾಡ್ತಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ಭರ್ಜರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಮಂಗಳವಾರ ಅಬ್ಬರ ಮಳೆಯಿಂದ ಬೆಂಗಳೂರಿಗರು ಪಡಬಾರದ ಪಾಡು ಪಟ್ಟಿದ್ದಾರೆ. ಈ ಸ್ಥಿತಿ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ. ಯಾಕಂದ್ರೆ, ದಸರಾ ಹಬ್ಬದಿಂದಾಗಿ ಮೂರು ದಿನಗಳ ಕಾಲ ಸಾಲು ಸಾಲು ರಜೆಯಿದ್ದ ಕಾರಣ ಟ್ರಾಫಿಕ್ ಸಮಸ್ಯೆ ಕಡಿಮೆಯಿತ್ತು. ಇಂದಿನಿಂದ ಮತ್ತೆ ಕೆಲಸ ಕಾರ್ಯಗಳು ಶುರುವಾಗಿದ್ದು, ಮಳೆಯಿಂದ ಟ್ರಾಫಿಕ್ ಸಮಸ್ಯೆಯಿಂದ ಜನ ಮತ್ತಷ್ಟು ಹೈರಾಣಾಗಲಿದ್ದಾರೆ.