ಬೆಂಗಳೂರು: ಮಾಜಿ ಸಚಿವ, ಶಾಸಕ ಕೃಷ್ಣಬೈರೇಗೌಡರಿಗೆ ಬುದ್ದಿಭ್ರಮಣೆಯಾಗಿದೆ ಅಂತಾ ಅನರ್ಹ ಶಾಸಕ ಎಂಟಿಬಿ ನಾಗರಾಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರ ಕಳೆದುಕೊಂಡು ಬುದ್ಧಿಭ್ರಮಣೆಯಾಗಿದೆ. ಯಾರ ಮೇಲಾದ್ರೂ ಆರೋಪ ಮಾಡ್ತಾ ತಿರುಗುತ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದ್ರು.
ಸಿಎಂ ಬಿ.ಎಸ್ ಯಡಿಯೂರಪ್ಪರನ್ನ ಭೇಟಿ ನೀಡಿದ ಬಳಿಕ ಮಾತ್ನಾಡಿದ ಎಂಟಿಬಿ ನಾಗರಾಜ, ನಾನು ರಾಜಕೀಯ ಜೀವನದಲ್ಲಿ ಎಂದೂ ಹೀಗೆ ಮಾತ್ನಾಡಿಲ್ಲ. ನಾನು ಮಾತ್ನಾಡಿರುವ ಬಗ್ಗೆ ಒಂದು ದಾಖಲೆ ನೀಡಲಿ ಎಂದ್ರು. ಸಂತೋಷ ಅವರನ್ನ ನಾನು ಭೇಟಿಯಾಗಿಲ್ಲ. ಯಾರು ಭೇಟಿಯಾದ್ರು ಅನ್ನೋದು ಗೊತ್ತಿಲ್ಲ ಎಂದ ಅನರ್ಹ ಶಾಸಕ, ನಾನು ಮತ್ತೊಮ್ಮೆ ಗೆಲ್ಲುವ ವಿಶಾಸ್ವವಿದೆ ಅಂತಾ ಹೇಳಿದ್ರು.