ಸಾಲ ಕೊಟ್ಟಿದ್ದಾರೆಂದ ಜಾರಕಿಹೊಳಿ.. ಕೊಟ್ಟಿಲ್ಲಂದ ಎಂಟಿಬಿ

322

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಸಿ.ಪಿ ಯೋಗೇಶ್ವರಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಿರುವುದಕ್ಕೆ ಹೆಚ್.ವಿಶ್ವನಾಥ ಪರೋಕ್ಷವಾಗಿ ಟೀಕೆ ಮಾಡುತ್ತಲೇ ಇದ್ದಾರೆ. ಅಲ್ದೇ, ಸಚಿವ ರಮೇಶ ಜಾರಕಿಹೊಳಿ ಸಿ.ಪಿ ಯೋಗೇಶ್ವರಗೆ ಯಾಕ ಬೆಂಬಲ ನೀಡ್ತಿದ್ದಾರೆ ಗೊತ್ತಿಲ್ಲವೆಂದು ಹೇಳಿದ್ದು, ರಾಜಕೀಯ ಗುದ್ದಾಟಕ್ಕೆ ದಾರಿ ಮಾಡಿದೆ.

ಈ ಬಗ್ಗೆ ಮಾತ್ನಾಡಿ ಸಚಿವ ಜಾರಕಿಹೊಳಿ, ವಲಸಿಗ ಶಾಸಕರನ್ನ ಒಗ್ಗೂಡಿಸಲು ಯೋಗೇಶ್ವರ ಸಾಲ ಮಾಡಿದ್ದಾರೆ. ಅದು ಎಂಟಿಬಿ ನಾಗರಾಜ ಬಳಿ ಸಾಲ ಪಡೆದಿದ್ದಾರೆ. ಅವರ ಮನೆಯ ಮೇಲೆ 9 ಕೋಟಿ ಸಾಲವಿದೆ. ಹೀಗಾಗಿ ಬಿಜೆಪಿ ಸರ್ಕಾರ ರಚನೆಯಾಗುವಲ್ಲಿ ಯೋಗೇಶ್ವರ ಪಾತ್ರ ಪ್ರಮುಖವಾಗಿದೆ ಎಂದಿದ್ದಾರೆ.

ಇನ್ನು ಸಾಲ ಕೊಟ್ಟ ವಿಚಾರದಲ್ಲಿ ಮಾತ್ನಾಡಿದ ನೂತನ ಸಚಿವ ಎಂಟಿಬಿ ನಾಗರಾಜ, ಸಚಿವ ರಮೇಶ ಜಾರಕಿಹೊಳಿ ಯಾಕೆ ಹೀಗೆ ಹೇಳಿದ್ದಾರೆ ಗೊತ್ತಿಲ್ಲ. ಸಿ.ಪಿ ಯೋಗೇಶ್ವರ ನನ್ನ ನಡುವೆ ಯಾವುದೇ ವ್ಯವಹಾರವಿಲ್ಲ. ಅವರಿಗೆ ಸಾಲ ಕೊಟ್ಟಿಲ್ಲ. ಈ ಬಗ್ಗೆ ರಮೇಶ ಅವರ ಬಳಿ ನಾನೇ ಕೇಳುತ್ತೇನೆ ಎಂದಿದ್ದಾರೆ.

ನಾಯಕರ ಈ ರೀತಿಯ ತದ್ವಿರುದ್ಧ ಹೇಳಿಕೆಗಳಿಂದ ರಾಜಕೀಯ ಕೆಸರು ಹೆಚ್ಚಾಗ್ತಿದೆ. ಸಾಲ ಕೊಡದೆ ಕೊಟ್ಟಿದ್ದೇವೆ ಅನ್ನೋ ಜನರು ಇರುವ ಹೊತ್ತಿನಲ್ಲಿ, ಸಾಲ ಕೊಟ್ಟಿದ್ದಾರೆ ಅಂದ್ರೆ ಇಲ್ಲ ಅನ್ನೋರು ಇರ್ತಾರೆ ಅಂದ್ರೆ ಏನ್ ನಡೀತಿದೆ ಗೊತ್ತಾಗ್ತಿಲ್ಲ ಅಂತಿದ್ದಾರೆ ಸಾರ್ವಜನಿಕರು. ಬಂಡಾಯದ ಸಮಯದಲ್ಲಿ ಒಟ್ಟಿಗೆಯಿದ್ದ ನಾಯಕರ ನಡುವೆಯೇ ಇಷ್ಟೊಂದು ಭಿನ್ನಾಭಿಪ್ರಾಯ ಯಾಕೆ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!