ಸಿಎಂ ಪರಿಹಾರ ನಿಧಿಗೆ ಪವರ್ ಸ್ಟಾರ್ 50 ಲಕ್ಷ ದೇಣಿಗೆ

384

ಬೆಂಗಳೂರು: ಕರೋನಾ ಮಹಾಮಾರಿ ವಿರುದ್ಧ ಹೋರಾಡಲು ಯಾರಾದ್ರೂ ದೇಣಿಗೆ ನೀಡಬಹುದು ಅನ್ನೋ ಮಾತನ್ನ ಸಿಎಂ ಹೇಳಿದ್ರು. ಹೀಗಾಗಿ ನಾಡಿನ ಅನೇಕ ಜನರು ಸಿಎಂ ಪರಿಹಾರ ನಿಧಿಗೆ ಧನ ಸಹಾಯ ಮಾಡ್ತಿದ್ದಾರೆ. ಅದೇ ರೀತಿ ಪವರ್ ಸ್ಟಾರ್ ಪುನೀತರಾಜಕುಮಾರ ಸಹ ದೇಣಿಗೆ ನೀಡಿದ್ದಾರೆ.

ಸಿಎಂ ಅವರ ಪರಿಹಾರ ನಿಧಿಗೆ ನಟ ಪುನೀತರಾಜಕುಮಾರ ಅವರು 50 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಮೂಲಕ ಕರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಒಂದಿಷ್ಟು ಆರ್ಥಿಕ ಸಹಾಯ ಮಾಡಿದ್ದಾರೆ. ಈ ಬಗ್ಗೆ ಅವರ ಅಭಿಮಾನಿಗಳು ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!