ಬೆಂಗಳೂರು: ಕರೋನಾ ಸೋಂಕಿತರನ್ನ ಕೇರಳದಿಂದ ರಾಜ್ಯಕ್ಕೆ ಕಳುಹಿಸಲಾಗ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಹೀಗಾಗಿ ಕೇರಳದಿಂದ ರಾಜ್ಯಕ್ಕೆ ಬರುವವರನ್ನ ಗಡಿಯಲ್ಲಿಯೇ ತಡಿಯಿರಿ ಎಂದು ಮಾಜಿ ಸಿಎಂ ಹೇಳಿದ್ದಾರೆ.
ಕರೋನಾ ವಿರುದ್ಧ ಹೋರಾಡಲು ಕೆಪಿಸಿಸಿ ಟಾಸ್ಕ್ ಪೋರ್ಸ್ ರೆಡಿಯಾಗಿದೆ. ಇದರ ಮೊದಲ ಸಭೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರ ನೇತೃತ್ವದಲ್ಲಿ ನಡೆಯಿತು. ವೇಳೆ ಮೈಸೂರು ಜಿಲ್ಲಾಧಿಕಾರಿ ಜೊತೆ ಫೋನ್ ಮೂಲಕ ಮಾತ್ನಾಡಿದ ಸಿದ್ದು, ದಕ್ಷಿಣ ಕನ್ನಡ, ಕೊಡಗು, ಮೈಸೂರು ಗಡಿ ಮೂಲಕ ಕೇರಳದಿಂದ ಸೋಂಕಿತರನ್ನ ಕಳುಹಿಸಲಾಗ್ತಿದೆ. ಅವರನ್ನ ಗಡಿಯಲ್ಲೇ ತಡೆಯಿರಿ ಎಂದು ಸೂಚಿಸಿದ್ದಾರೆ.
ಇನ್ನು ರೈತರಿಗೆ ಎಪಿಎಂಸಿ ಮೂಲಕ ಅವರ ಬೆಳೆಗಳನ್ನ ಖರೀದಿಸುವ ಕೆಲಸವಾಗಬೇಕು. ರೈತರಿಗೆ ಬೆಳೆ ನಷ್ಟವಾಗಬಾರದು. ಹೀಗಾಗಿ ಎಪಿಎಂಸಿಯಲ್ಲಿ ಖರೀದಿ ಮಾಡಿಯೆಂದು ಸೂಚಿಸಿದ್ದಾರೆ.