ಮೈಸೂರು: ವಸತಿ ಸಚಿವ ವಿ.ಸೋಮಣ್ಣ ಹೇಳಿರುವ ಮಾತು ಇದೀಗ ಬಿಜೆಪಿ ಪಾಳೆಯದಲ್ಲಿ ಒಂದಿಷ್ಟು ಅಸಮಧಾನಕ್ಕೆ ಕಾರಣವಾಗಿದೆ. ದಸರಾ ಸಂದರ್ಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ, ಮೈಸೂರು ಉಸ್ತುವಾರಿ ಸಚಿವರು ಮೂರ್ನಲ್ಕು ಸಾರಿ ಫೋನ್ ಮಾಡಿದ್ದಾರೆ. ಆಗ ಸಂಸದ ಪ್ರತಾಪ ಸಿಂಹನ ಜೊತೆ ಹುಷಾರಾಗಿರು ಎಂದು ಹೇಳಿದ್ದರಂತೆ.
ಪ್ರತಾಪ ಸಿಂಹ ಬುದ್ದಿವಂತ, ಆತನನ್ನ ಸುಲಭವಾಗಿ ನಂಬಬೇಡ ಎಂದು ಸಿದ್ದರಾಮಯ್ಯ ನನಗೆ ಸಲಹೆ ನೀಡಿದ್ರು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ದಸರಾ ಟೈಂನಲ್ಲಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನ ಸಲ್ಲಿಸುವ ಸಲುವಾಗಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರ ಹೇಳಿದ್ದು, ಇದು ಬಿಜೆಪಿ ವಲಯದಲ್ಲಿ ಒಂದಿಷ್ಟು ಅಸಮಧಾನಕ್ಕೆ ಕಾರಣವಾಗಿದೆ.