ಬೆಂಗಳೂರು: ನಾಳೆಯಿಂದ ಮೂರು ದಿನಗಳ ಕಾಲ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯಲಿದ್ದು, ಮಾಧ್ಯಮಗಳಿಗೆ ನೋ ಎಂಟ್ರಿ ಎನ್ನಲಾಗಿದೆ. ಈ ಬಗ್ಗೆ ಸ್ಪೀಕರ್ ವಿಶೇಶ್ವರ ಹೆಗಡೆ ಕಾಗೇರಿ ಅವರು ಆದೇಶ ಹೊರಡಿಸಿದ್ದಾರೆ.
ದೃಶ್ಯ ಮಾಧ್ಯಮಗಳಿಗೆ ನಿರ್ಬಂಧ ಹೇರುವ ಮೂಲಕ ರಾಜ್ಯ ಸರ್ಕಾರ ವಿವಾದವೊಂದು ಮೈಮೇಲೆ ಎಳೆದುಕೊಳ್ತಿದೆ. ಅಧಿವೇಶನದಲ್ಲಿನ ಚರ್ಚೆಗಳನ್ನ ಜನರಿಗೆ ತೋರಿಸಲು ಅವಕಾಶ ನೀಡದೆ, ಸರ್ಕಾರದ ಚಾನೆಲ್ ನಲ್ಲಿ ಬರುವ ದೃಶ್ಯಗಳನ್ನ ನೀಡಲಾಗುತ್ತೆ. ಅದನ್ನ ಪಡೆದುಕೊಳ್ಳಿ ಅನ್ನೋದು ಎಷ್ಟರ ಮಟ್ಟಿಗೆ ಸರಿ ಅಂತಾ ಕೇಳಲಾಗ್ತಿದೆ.
ಅಧಿವೇಶನಕ್ಕೆ ದೃಶ್ಯಮಾಧ್ಯಮಗಳಿಗೆ ಕಡಿವಾಣ ಹಾಕಿರುವ ಬಗ್ಗೆ ಮಾತ್ನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು, ಇದು ಬಿಜೆಪಿಯ ಪ್ರಜಾಪ್ರಭುತ್ವದ ವ್ಯವಸ್ಥೆ ಅಂತಾ ಕುಟುಕಿದ್ದಾರೆ.